ಮಣಿಪಾಲ್ ಆಸ್ಪತ್ರೆಯ ಸಿಬ್ಬಂದಿ ಜೀವನ್ ಮಾತನಾಡಿ, ‘ಮೊದಲು ಆಕ್ಸಿಜನ್ ಕೊರತೆ ಇರಲಿಲ್ಲ. ಕೊರೊನಾ ಸೋಂಕಿನಿಂದ ಸಂಕಷ್ಟಕ್ಕೀಡಾಗುವವರ ಸಂಖ್ಯೆ ಹೆಚ್ಚಿದ್ದರ ಪರಿಣಾಮ ಆಕ್ಸಿಜನ್ ಸಮಸ್ಯೆಯಾಯಿತು. ಸಂಗ್ರಹ ಇರುವ ಕಡೆಯಲ್ಲಿ ಹೋಗಿ ರೋಗಿಯ ಜೀವ ಉಳಿಸಬೇಕೆಂದು ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಿದ್ದೇವೆ. ಆಕ್ಸಿಜನ್ ಶೇಖರಣೆಗೆ ಮುಂದಾಗಿದ್ದೇವೆ’ ಎಂದು ತಿಳಿಸಿದರು.