ರಾಮರಾಜ ಅರಸ್ ರಸ್ತೆ, ಸರ್ಕಾರಿ ಬಸ್ ನಿಲ್ದಾಣದ ರಸ್ತೆ, ಕೆಂಪೇಗೌಡ ಸರ್ಕಲ್, ರಾಮಮಂದಿರ ರಸ್ತೆಗಳಲ್ಲಿ ವಾಹನಗಳ ಜಮಾವಣೆಗೊಂಡಿದ್ದವು. ಪೊಲೀಸರು ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿದರು. 1 ಕೆ.ಜಿ.ಈರುಳ್ಳಿ ₹100, ಟೊಮೆಟೊ ₹60, ಆಲೂಗಡ್ಡೆ ₹50,ಸೇಬು ಕೆ.ಜಿ.ಯೊಂದಕ್ಕೆ ₹200, ಬಾಳೆಹಣ್ಣು ₹60ರಂತೆ ಮಾರಾಟವಾಯಿತು. ಸೊಪ್ಪು, ತರಕಾರಿ ಬೆಲೆ ಗಗನಕ್ಕೇರಿದ್ದರೂ ಖರೀದಿಸಿದರು. ದಿನಸಿ ಅಂಗಡಿಗಳ ಮುಂದೆ ಜನರ ಗುಂಪು ನೂಕುನುಗ್ಗಲಿನಿಂದ ಕೂಡಿತ್ತು. ಅಫೆ, ಮತ್ತು ಆಟೊ ರಿಕ್ಷಾಗಳು ಮಾಮೂಲಿನಂತೆ ಜನರನ್ನು ತುಂಬಿಕೊಂಡು ಸಂಚರಿಸಿದವು. ಸರ್ಕಾರಿ ಬಸ್ ಸಂಚಾರ ವಿರಳವಾಗಿತ್ತು. ಕೃಷಿ, ತೋಟಗಾರಿಕೆ, ಕಂದಾಯ, ಪಶುಪಾಲನೆ, ಉಪನೋಂದಣಿ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿದವು. ನೌಕರರ ಹಾಜರಾತಿ ಕಡಿಮೆ ಇತ್ತು.