ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಭರತ್ ರಾಜ್ ಮಾತನಾಡಿ, ‘ಸದಾ ಓದು, ವಿಭಾಗದಲ್ಲಿ ಅಚ್ಚುಕಟ್ಟಿನ ಕಾರ್ಯನಿರ್ವಹಣೆ, ಅಪಾರ ಜ್ಞಾನ ಹೊಂದಿದ್ದ ಲಲಿತಾ ಅವರ ನಿವೃತ್ತಿಯಾಗುತ್ತಿರುವುದು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತುಂಬಲಾರದ ಕೊರತೆ. ಅವರು ನಿವೃತ್ತ ಜೀವನವನ್ನು ಚಟುವಟಿಕೆಯಿಂದ ಕಳೆಯಲಿ’ ಎಂದು ಆಶಿಸಿದರು.