ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೀಲೂರು ಮುನಿರಾಜು ಮಾತನಾಡಿ, ಅಗ್ನಿಪಥ ಯೋಜನೆಯು ಜೈಜವಾನ್, ಜೈಕಿಸಾನ್ ಘೋಷಣೆಯನ್ನು ತಿರುಚಲು ನಡೆದಿರುವ ಹುನ್ನಾರವಾಗಿದೆ. ಇದು ದೇಶದ ಭವಿಷ್ಯದೊಂದಿಗೆ ಆಡುತ್ತಿರುವ ಚೆಲ್ಲಾಟವಾಗಿದೆ. ರಾಷ್ಟ್ರದ ಭದ್ರತೆ ಹಾಗೂ ನಿರುದ್ಯೋಗಿ ಯುವಕರ ಕನಸಿಗೆ ಕಲ್ಲು ಹಾಕುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.