ಆದರೆ, ಮೇಲ್ವರ್ಗದವರಿಗೆ ಸಹಾಯ ಮಾಡುವ ಮೂಲಕ ಅರಣ್ಯ ಅಧಿಕಾರಿಗಳು ಇರುಗಳಿಗರಿಗೆ ಅನ್ಯಾಯ ಮಾಡಿದ್ದಾರೆ. ಬುಡಕಟ್ಟು ಇರುಗಳಿಗರನ್ನು ಕಾಡಿನಿಂದ ಭೂಮಿಹಕ್ಕು ನೀಡದೆ ಒಕ್ಕಲೆಬ್ಬಿಸಲಾಗಿದೆ. ಗ್ರಾಮ ಅರಣ್ಯ ಸಮಿತಿಗಳ ನಿರ್ಣಯ ಗಾಳಿಗೆ ತೂರಿ ಘೋರ ಅನ್ಯಾಯ ಮಾಡಲಾಗಿದೆ. ಇರುಗಳಿಗರು ಇಂದಿಗೂ ಗೆಡ್ಡೆಗೆಣಸು, ಇಲಿ ತಿಂದು ಜೀವನ ಸಾಗಿಸುತ್ತಿದ್ದಾರೆ. ಭೂಮಿಹಕ್ಕು ನೀಡುವಂತೆ ಆಗ್ರಹಿಸಿ ಶಾಂತಿಯುತ ಹೋರಾಟ ನಡೆಸಿದ ವನವಾಸಿಗಳನ್ನು ಅರಣ್ಯದಲ್ಲಿ ಶ್ರೀಗಂಧ ಕಳವು ಆರೋಪ ಹೊರೆಸಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಲಿಸಲಾಗುತ್ತಿದೆ.