ಸಂಸ್ಥೆಯ ರಾಮನಗರ ಜಿಲ್ಲಾ ಸಂಯೋಜಕಿ ಗೋಪಾ ರಾಮನ್ ಮಾತನಾಡಿ, ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶಗಳಿದ್ದರೂ ಸ್ತ್ರೀಯನ್ನು ಎರಡನೇ ದರ್ಜೆ ಪ್ರಜೆಯನ್ನಾಗಿ ನೋಡಲಾಗುತ್ತಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಬಾಲ್ಯವಿವಾಹ, ವರದಕ್ಷಿಣೆ, ಗಂಡು ಮಗು ಬೇಕು ಎನ್ನುವ ಹಂಬಲ, ಹೆಣ್ಣು ಶಿಶುಹತ್ಯೆ, ವಿವಾಹ ವಿಚ್ಛೇದನ, ಸಾಮಾಜಿಕ ಅಭದ್ರತೆ, ಅತ್ಯಾಚಾರ, ಲೈಂಗಿಕ ಹಾಗೂ ಕೌಟುಂಬಿಕ ದೌರ್ಜನ್ಯ ಸುಳಿಗೆ ಹೆಣ್ಣು ಸಿಲುಕಿ ತತ್ತರಿಸುತ್ತಿದ್ದಾಳೆ ಎಂದು ವಿಷಾದಿಸಿದರು.