ರಾಮನಗರ: ತಾಲ್ಲೂಕಿನ ಬಸವನಪುರದಲ್ಲಿ ಭಾನುವಾರ ಮುಂಜಾನೆ ರಾಮನಗರ ಮ್ಯಾರಥಾನ್ ಆರನೇ ಆವೃತ್ತಿಯು ನಡೆಯಿತು.
21 ಕಿ.ಮೀ, 11 ಕಿ.ಮೀ ಹಾಗೂ 7 ಕಿ.ಮೀ ದೂರದ ಐದು ವಿಭಾಗಗಳಲ್ಲಿ ಓಟ ನಡೆಯಿತು. ರಾಜ್ಯದ ಒಂದು ಸಾವಿರಕ್ಕೂ ಹೆಚ್ಚು ಓಟಗಾರರು ಪಾಲ್ಗೊಂಡರು.
ಜಿಲ್ಲಾ ಪಂಚಾಯಿತಿ ಸಿಇಒ ಮುಲ್ಲೈ ಮುಹಿಲನ್ ಹಾಗೂ ಮಾಜಿ ಶಾಸಕ ಕೆ. ರಾಜು ಮ್ಯಾರಥಾನ್ ಗೆ ಚಾಲನೆ ನೀಡಿದರು. ಯಲ್ಲೋ ಅಂಡ್ ರೆಡ್ ಫೌಂಡೇಶನ್ ನೇತೃತ್ವದಲ್ಲಿ ವೃದ್ಧರ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊತ್ತು ಈ ಓಟ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಸಿಇಒ ಮುಲ್ಲೈ ಮುಹಿಲನ್ ಹಾಗೂ ಮಾಜಿ ಶಾಸಕ ಕೆ. ರಾಜು ಮ್ಯಾರಥಾನ್ ಗೆ ಚಾಲನೆ ನೀಡಿದರು.