ರಾಮನಗರ: ನಗರದ ಜಿಲ್ಲಾ ಕಾರಾಗೃಹದ ಮುಂಭಾಗ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಪಬ್ಲಿಕ್ ಟಿವಿ ಸುದ್ದಿವಾಹಿನಿ ವರದಿಗಾರ ಹನುಮಂತ (32) ಮೃತಪಟ್ಟರು.
ಅವರು ವರದಿಗಾರಿಕೆ ಮುಗಿಸಿ ಜೈಲಿನಿಂದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹೊರಟಿದ್ದ ವೇಳೆ ಎಟಿಎಂಗೆ ನಗದು ಪೂರೈಸುವ ವಾಹನ ಡಿಕ್ಕಿಯಾಯಿತು. ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಅಸುನೀಗಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಅವರ ಸ್ವಗ್ರಾಮವಾದ ಕನಕಪುರ ತಾಲ್ಲೂಕಿನ ಪಡವಣಗೆರೆಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.