<p><strong>ಬೆಳಗಾವಿ</strong>: ‘ರಾಮನಗರ ಜಿಲ್ಲೆಯ ಬಿಡದಿ ಬಳಿ ‘ಟೌನ್ಶಿಪ್’ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕೆ ರೈತರ ವಿರೋಧವಿದ್ದು, ಅನುಮೋದನೆ ಹಿಂಪಡೆಯುವುದರ ಜೊತೆಗೆ ಯೋಜನೆಯನ್ನೂ ಸಂಪೂರ್ಣವಾಗಿ ಕೈ ಬಿಡಬೇಕು’ ಎಂದು ಭಾರತೀಯ ಕೃಷಿಕ ಸಮಾಜ– ಕರ್ನಾಟಕ ಅಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು.</p>.<p>‘ಈ ಟೌನ್ಶಿಪ್ಗೆ 25 ಗ್ರಾಮಗಳ 9,640 ಎಕರೆ ಜಮೀನು ಬಳಸಿಕೊಳ್ಳುವ ಉದ್ದೇಶವಿದೆ. ಇದೆಲ್ಲವೂ ಫಲವತ್ತಾದ ಜಮೀನಾಗಿದ್ದು, ರೈತರಿಗೆ ಪರಿಹಾರದ ಆಸೆ ತೋರಿಸಿ ಜಮೀನು ಕಬಳಿಕೆ ಸರಿಯಲ್ಲ. ಇದರಿಂದ 25 ಗ್ರಾಮಗಳ ಜನ ಅತಂತ್ರ ಆಗುವರು’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಸಾವಿರಾರು ಕುಟುಂಬಗಳನ್ನು ಏಕಕಾಲಕ್ಕೆ ಬೀದಿಪಾಲು ಮಾಡುವ ರಿಯಲ್ ಎಸ್ಟೇಟ್ ಯೋಜನೆಯನ್ನು ರೈತ ಸಂಘಟನೆಗಳು ವಿರೋಧಿ ಸುತ್ತಲೇ ಇವೆ. ಉಪಮುಖ್ಯಮಂತ್ರಿ ಅವರು ಹಠಮಾರಿತನ ಕೈ ಬಿಡಬೇಕು’ ಎಂದರು.</p>.<p>‘ರೈತರಿಗೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳದ್ದೇ ಕಾಟ ಹೆಚ್ಚುತ್ತಿದೆ. ಬೇಡದ ವಸ್ತು ಖರೀದಿಸುವಂತೆ ಆನ್ಲೈನ್ ಲಿಂಕುಗಳನ್ನು ರೈತರಿಗೆ ಕಳುಹಿಸುತ್ತಾರೆ’ ಎಂದರು.</p>.<p>ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಹೊಂಗರಗಾವಿ, ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಮುಖಂಡ ಮಲ್ಲಿಕಾರ್ಜುನ ಮುಗಪ್ಪಗೋಳ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-21-569041400</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ರಾಮನಗರ ಜಿಲ್ಲೆಯ ಬಿಡದಿ ಬಳಿ ‘ಟೌನ್ಶಿಪ್’ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕೆ ರೈತರ ವಿರೋಧವಿದ್ದು, ಅನುಮೋದನೆ ಹಿಂಪಡೆಯುವುದರ ಜೊತೆಗೆ ಯೋಜನೆಯನ್ನೂ ಸಂಪೂರ್ಣವಾಗಿ ಕೈ ಬಿಡಬೇಕು’ ಎಂದು ಭಾರತೀಯ ಕೃಷಿಕ ಸಮಾಜ– ಕರ್ನಾಟಕ ಅಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು.</p>.<p>‘ಈ ಟೌನ್ಶಿಪ್ಗೆ 25 ಗ್ರಾಮಗಳ 9,640 ಎಕರೆ ಜಮೀನು ಬಳಸಿಕೊಳ್ಳುವ ಉದ್ದೇಶವಿದೆ. ಇದೆಲ್ಲವೂ ಫಲವತ್ತಾದ ಜಮೀನಾಗಿದ್ದು, ರೈತರಿಗೆ ಪರಿಹಾರದ ಆಸೆ ತೋರಿಸಿ ಜಮೀನು ಕಬಳಿಕೆ ಸರಿಯಲ್ಲ. ಇದರಿಂದ 25 ಗ್ರಾಮಗಳ ಜನ ಅತಂತ್ರ ಆಗುವರು’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಸಾವಿರಾರು ಕುಟುಂಬಗಳನ್ನು ಏಕಕಾಲಕ್ಕೆ ಬೀದಿಪಾಲು ಮಾಡುವ ರಿಯಲ್ ಎಸ್ಟೇಟ್ ಯೋಜನೆಯನ್ನು ರೈತ ಸಂಘಟನೆಗಳು ವಿರೋಧಿ ಸುತ್ತಲೇ ಇವೆ. ಉಪಮುಖ್ಯಮಂತ್ರಿ ಅವರು ಹಠಮಾರಿತನ ಕೈ ಬಿಡಬೇಕು’ ಎಂದರು.</p>.<p>‘ರೈತರಿಗೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳದ್ದೇ ಕಾಟ ಹೆಚ್ಚುತ್ತಿದೆ. ಬೇಡದ ವಸ್ತು ಖರೀದಿಸುವಂತೆ ಆನ್ಲೈನ್ ಲಿಂಕುಗಳನ್ನು ರೈತರಿಗೆ ಕಳುಹಿಸುತ್ತಾರೆ’ ಎಂದರು.</p>.<p>ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಹೊಂಗರಗಾವಿ, ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಮುಖಂಡ ಮಲ್ಲಿಕಾರ್ಜುನ ಮುಗಪ್ಪಗೋಳ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-21-569041400</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>