<p><strong>ಚನ್ನಪಟ್ಟಣ</strong>: ತಾಲ್ಲೂಕಿನ ಎಲ್ಲ ಕೆರೆಗಳಿಗೆ ಪೈಪ್ಲೈನ್ ಮೂಲಕ ನೀರು ತುಂಬಿಸಲು ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.</p>.<p>ತಾಲ್ಲೂಕಿನ ವಾಲೆತೋಪು ಬಳಿ ಚೆಕ್ ಡ್ಯಾಂ ಬಳಿ ಅಳವಡಿಸಿರುವ ಪೈಪ್ಲೈನ್ಗೆ ಶುಕ್ರವಾರ ಪೂಜೆ ಮಾಡುವುದರ ಮೂಲಕ ತಾಲ್ಲೂಕಿನ ಹೊಡಿಕೆಹೊಸಹಳ್ಳಿ ಹಾಗೂ ಎಸ್.ಎಂ.ಹಳ್ಳಿ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ತಾಲ್ಲೂಕಿನಲ್ಲಿ ಉಳಿಕೆ ಇರುವ ಎಲ್ಲ ಕೆರೆಗಳಿಗೆ ಪೈಪ್ ಲೈನ್ ಸಂಪರ್ಕ ಪೂರ್ಣಗೊಳಿಸಿ ಶಾಶ್ವತವಾಗಿ ನೀರಾವರಿ ಯೋಜನೆ ಕಲ್ಪಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರಾವರಿ ನಿಗಮದ ಕಣ್ವ ಯೋಜನೆ ವಿಭಾಗದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಇದಕ್ಕೆ ಬೇಕಾದ ವಿಶೇಷ ಅನುದಾನ ತರಲಾಗುವುದು ಎಂದರು.</p>.<p>ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿ ಮಾಡುವ ಉದ್ದೇಶದಿಂದ ಗುರುತ್ವಾಕಾರ್ಷಣೆ ಆಧಾರದ ಮೇಲೆ ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗಿತ್ತು. ತಾಲ್ಲೂಕಿನ ಎಲ್ಲ ಕೆರೆಗಳನ್ನು ತುಂಬಿಸಬೇಕು ಎಂದು ತಾಲ್ಲೂಕಿನ ಜನರ ಒತ್ತಾಯ ಇರುವುದರಿಂದ ಮುಂದೆ ಮತ್ತಷ್ಟು ನೀರಾವರಿ ಯೋಜನೆ ಕೈಗೊಳ್ಳಲಾಗುವುದು ಎಂದರು.</p>.<p>ತಾಲ್ಲೂಕಿನ ಕೂಡ್ಲೂರು ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿ ಕೋಡಿ ಮೂಲಕ ಹೊಡಿಕೆಹೊಸಹಳ್ಳಿ ಹಾಗೂ ಎಸ್.ಎಂ.ಹಳ್ಳಿ ಕೆರೆಗಳಿಗೆ ನೀರು ಹರಿಯುತ್ತಿತ್ತು. ಆದರೆ, ಈಚೆಗೆ ಕೂಡ್ಲೂರು ಕೆರೆ ತಡೆಗೋಡೆ ಬಳಿ ಸಮಸ್ಯೆ ಎದುರಾಗಿ ನೀರು ಸೋರಿಕೆಯಾಗುತ್ತಿತ್ತು. ಈ ತಡೆಗೋಡೆ ದುರಸ್ತಿ ಮಾಡಬೇಕಾಗಿರುವ ಕಾರಣ ಪೈಪ್ಲೈನ್ ಮಾರ್ಗದಿಂದ ಈ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಲ್ಲೂಕಿನ ಅಕ್ಕೂರು ಕೆರೆ ವಿಚಾರದಲ್ಲಿಯೂ ಇದೇ ರೀತಿ ಸಮಸ್ಯೆ ಎದುರಾಗಿದೆ. ಆ ಭಾಗದ ಕೆರೆಗಳಿಗೆ ನೀರು ತುಂಬಿಸಲು ಪೈಪ್ ಲೈನ್ ಮಾರ್ಗ ಅನುಸರಿಸಲಾಗುವುದು ಎಂದರು.</p>.<p>ಕಾವೇರಿ ನೀರಾವರಿ ನಿಗಮದ ಇಇ ಮೋಹನ್ ಕುಮಾರ್, ಎಇ ಸುರೇಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಮುಖಂಡರಾದ ಧ್ರುವಕುಮಾರ್, ಧನಂಜಯ, ಗುಂಡಣ್ಣ, ವಾಲೇತೋಪು ಆನಂದ್, ನೀಲಸಂದ್ರ ಸದಾನಂದ, ಎಚ್.ವಿ.ನಂಜೇಗೌಡ, ಶಿವಮಲ್ಲೇಗೌಡ, ನಂಜೇಗೌಡ, ಹನುಮಂತೇಗೌಡ, ಅರವಿಂದ, ಮಾಳಗಾಳು ಪಾರ್ಥ ಹಾಗೂ ಹೊಡಿಕೆಹೊಸಹಳ್ಳಿ, ಎಸ್.ಎಂ.ಹಳ್ಳಿ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ತಾಲ್ಲೂಕಿನ ಎಲ್ಲ ಕೆರೆಗಳಿಗೆ ಪೈಪ್ಲೈನ್ ಮೂಲಕ ನೀರು ತುಂಬಿಸಲು ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.</p>.<p>ತಾಲ್ಲೂಕಿನ ವಾಲೆತೋಪು ಬಳಿ ಚೆಕ್ ಡ್ಯಾಂ ಬಳಿ ಅಳವಡಿಸಿರುವ ಪೈಪ್ಲೈನ್ಗೆ ಶುಕ್ರವಾರ ಪೂಜೆ ಮಾಡುವುದರ ಮೂಲಕ ತಾಲ್ಲೂಕಿನ ಹೊಡಿಕೆಹೊಸಹಳ್ಳಿ ಹಾಗೂ ಎಸ್.ಎಂ.ಹಳ್ಳಿ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ತಾಲ್ಲೂಕಿನಲ್ಲಿ ಉಳಿಕೆ ಇರುವ ಎಲ್ಲ ಕೆರೆಗಳಿಗೆ ಪೈಪ್ ಲೈನ್ ಸಂಪರ್ಕ ಪೂರ್ಣಗೊಳಿಸಿ ಶಾಶ್ವತವಾಗಿ ನೀರಾವರಿ ಯೋಜನೆ ಕಲ್ಪಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರಾವರಿ ನಿಗಮದ ಕಣ್ವ ಯೋಜನೆ ವಿಭಾಗದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಇದಕ್ಕೆ ಬೇಕಾದ ವಿಶೇಷ ಅನುದಾನ ತರಲಾಗುವುದು ಎಂದರು.</p>.<p>ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿ ಮಾಡುವ ಉದ್ದೇಶದಿಂದ ಗುರುತ್ವಾಕಾರ್ಷಣೆ ಆಧಾರದ ಮೇಲೆ ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗಿತ್ತು. ತಾಲ್ಲೂಕಿನ ಎಲ್ಲ ಕೆರೆಗಳನ್ನು ತುಂಬಿಸಬೇಕು ಎಂದು ತಾಲ್ಲೂಕಿನ ಜನರ ಒತ್ತಾಯ ಇರುವುದರಿಂದ ಮುಂದೆ ಮತ್ತಷ್ಟು ನೀರಾವರಿ ಯೋಜನೆ ಕೈಗೊಳ್ಳಲಾಗುವುದು ಎಂದರು.</p>.<p>ತಾಲ್ಲೂಕಿನ ಕೂಡ್ಲೂರು ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿ ಕೋಡಿ ಮೂಲಕ ಹೊಡಿಕೆಹೊಸಹಳ್ಳಿ ಹಾಗೂ ಎಸ್.ಎಂ.ಹಳ್ಳಿ ಕೆರೆಗಳಿಗೆ ನೀರು ಹರಿಯುತ್ತಿತ್ತು. ಆದರೆ, ಈಚೆಗೆ ಕೂಡ್ಲೂರು ಕೆರೆ ತಡೆಗೋಡೆ ಬಳಿ ಸಮಸ್ಯೆ ಎದುರಾಗಿ ನೀರು ಸೋರಿಕೆಯಾಗುತ್ತಿತ್ತು. ಈ ತಡೆಗೋಡೆ ದುರಸ್ತಿ ಮಾಡಬೇಕಾಗಿರುವ ಕಾರಣ ಪೈಪ್ಲೈನ್ ಮಾರ್ಗದಿಂದ ಈ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಲ್ಲೂಕಿನ ಅಕ್ಕೂರು ಕೆರೆ ವಿಚಾರದಲ್ಲಿಯೂ ಇದೇ ರೀತಿ ಸಮಸ್ಯೆ ಎದುರಾಗಿದೆ. ಆ ಭಾಗದ ಕೆರೆಗಳಿಗೆ ನೀರು ತುಂಬಿಸಲು ಪೈಪ್ ಲೈನ್ ಮಾರ್ಗ ಅನುಸರಿಸಲಾಗುವುದು ಎಂದರು.</p>.<p>ಕಾವೇರಿ ನೀರಾವರಿ ನಿಗಮದ ಇಇ ಮೋಹನ್ ಕುಮಾರ್, ಎಇ ಸುರೇಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಮುಖಂಡರಾದ ಧ್ರುವಕುಮಾರ್, ಧನಂಜಯ, ಗುಂಡಣ್ಣ, ವಾಲೇತೋಪು ಆನಂದ್, ನೀಲಸಂದ್ರ ಸದಾನಂದ, ಎಚ್.ವಿ.ನಂಜೇಗೌಡ, ಶಿವಮಲ್ಲೇಗೌಡ, ನಂಜೇಗೌಡ, ಹನುಮಂತೇಗೌಡ, ಅರವಿಂದ, ಮಾಳಗಾಳು ಪಾರ್ಥ ಹಾಗೂ ಹೊಡಿಕೆಹೊಸಹಳ್ಳಿ, ಎಸ್.ಎಂ.ಹಳ್ಳಿ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>