ಶುಕ್ರವಾರ, 12 ಜೂನ್ 2026
×
ADVERTISEMENT

ರಾಮನಗರ ಜಿಲ್ಲೆಗೆ 5ನೇ ‘ಮುಖ್ಯಮಂತ್ರಿ’ ಪಟ್ಟ: ಇದುವರೆಗೆ ಸಿಎಂ ಹುದ್ದೆಗೇರಿದವರು..

Published : 28 ಮೇ 2026, 7:37 IST
Last Updated : 28 ಮೇ 2026, 7:37 IST
ADVERTISEMENT
ಫಾಲೋ ಮಾಡಿ
Comments
ಕೆಂಗಲ್ ಹನುಮಂತಯ್ಯ
ಕರ್ನಾಟಕದ ಮೊದಲ ಚುನಾಯಿತ ಮುಖ್ಯಮಂತ್ರಿ ಎಂಬ ಖ್ಯಾತಿ ಕೆಂಗಲ್‌ ಹನುಮಂತಯ್ಯ ಅವರದ್ದು. ರಾಜ್ಯದ ಆಡಳಿತ ಸೌಧವಾದ ವಿಧಾನಸೌಧ ನಿರ್ಮಿಸಿದ ಖ್ಯಾತಿಯ ಇವರು ರಾಮನಗರ ತಾಲ್ಲೂಕಿನವರು. ಅಂದಿನ ಮೈಸೂರು ರಾಜ್ಯದಲ್ಲಿ 1952 ಮತ್ತು 1957ರ ಚುನಾವಣೆಗಳಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1952ರ ಮೊದಲ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಹನುಮಂತಯ್ಯ ಅವರು 4 ವರ್ಷ 5 ತಿಂಗಳ ಆಡಳಿತ ನಡೆಸಿದ್ದರು.
ರಾಮಕೃಷ್ಣ ಹೆಗಡೆ
ರಾಜ್ಯದಲ್ಲಿ 1983ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾಗಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ರಾಮಕೃಷ್ಣ ಹೆಗಡೆ ಅವರಿಗೆ ಸಿ.ಎಂ ಆಗುವ ಅದೃಷ್ಟ ಬಂತು. ಆಗ, ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರೂ ಆಗಿರದ ಅವರಿಗೆ ಕನಕಪುರದಲ್ಲಿ ಜನತಾ ಪರಿವಾರದಿಂದ ಮೊದಲ ಬಾರಿಗೆ ಚುನಾಯಿತರಾಗಿದ್ದ ಪಿ.ಜಿ.ಆರ್. ಸಿಂಧ್ಯ ತಮ್ಮ ಸ್ಥಾನ ಬಿಟ್ಟು ಕೊಟ್ಟರು. ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಹೆಗಡೆ ಗೆಲುವು ಸಾಧಿಸಿ ಒಂದು ವರ್ಷ ಅಧಿಕಾರದಲ್ಲಿದ್ದರು.
ಎಚ್.ಡಿ. ದೇವೇಗೌಡ
1994ರ ನಡೆದ ಚುನಾವಣೆಯಲ್ಲಿ ರಾಮನಗರದಿಂದ ಮೊದಲ ಬಾರಿಗೆ ಎಚ್‌.ಡಿ. ದೇವೇಗೌಡ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದರು. ಆಗ ರಾಜ್ಯದಲ್ಲಿ ಜನತಾ ದಳ 115 ಸ್ಥಾನಗಳ ಪ್ರಚಂಡ ಬಹುಮತ ಪಡೆದು ಗೌಡರಿಗೆ ಸಿ.ಎಂ ಆಗುವ ಅವಕಾಶ ಬಂತು. 17 ತಿಂಗಳು ಆಡಳಿತ ನಡೆಸಿದ ಅವರು, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ದೇಶದ ಪ್ರಧಾನಮಂತ್ರಿ ಹುದ್ದೆಗೇರಿದರು.
ಎಚ್‌.ಡಿ. ಕುಮಾರಸ್ವಾಮಿ
ಜಿಲ್ಲೆಯಿಂದ ಎರಡು ಬಾರಿ ಸಿ.ಎಂ ಹುದ್ದೆಗೇರಿದ ಹಿರಿಮೆ ಎಚ್.ಡಿ. ಕುಮಾರಸ್ವಾಮಿ ಅವರದ್ದು. ತಮ್ಮ ತಂದೆಯ ಅದೃಷ್ಟದ ಕ್ಷೇತ್ರವಾದ ರಾಮನಗರದಿಂದ 2004ರಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅವರು, 12ನೇ ವಿಧಾನಸಭೆಯಲ್ಲಿ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಅಧಿಕಾರ ನಡೆಸಿದ್ದರು. 2018ರ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣದಲ್ಲೂ ಸ್ಪರ್ಧಿಸಿ ಗೆದ್ದಿದ್ದ ಅವರು, ಚನ್ನಪಟ್ಟಣ ಉಳಿಸಿಕೊಂಡರು. ಆಗ ಯಾರಿಗೂ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾದಾಗ ರಚನೆಯಾದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಮುಖ್ಯಮಂತ್ರಿಯಾದ ಎಚ್‌ಡಿಕೆ 14 ತಿಂಗಳು ಅಧಿಕಾರದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT