‘ರಾಮನಗರದಲ್ಲಿ ಕೆಲವು ಮುಖಂಡರು ಕೇವಲ ಕುಮಾರಸ್ವಾಮಿ ಬಂದಾಗ ಮಾತ್ರ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಾರೆ. ನಂತರದಲ್ಲಿ ಪ್ರಚಾರ ಮತ್ತಿತರ ಕಾರ್ಯಕ್ರಮಗಳಿಗೆ ಬರುವುದಿಲ್ಲ’ ಎಂಬ ಆರೋಪಗಳಿವೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಬಣಗಳಾಗಿ ಹೋಗಿದ್ದು, ಅಲ್ಲಿಯೂ ಎಚ್ಡಿಕೆ ಅನುಪಸ್ಥಿತಿಯಲ್ಲಿ ಯಾರು ನೇತೃತ್ವವಹಿಸಬೇಕು ಎಂಬ ಗೊಂದಲ ಇದೆ. ಈ ಎಲ್ಲವನ್ನೂ ಬಗೆಹರಿಸಿಕೊಂಡು ಜೆಡಿಎಸ್ ಇರುವ ಒಂದು ವಾರದ ಅವಧಿಯಲ್ಲೇ ಚುನಾವಣೆ ಪ್ರಚಾರ ನಡೆಸಬೇಕಿದೆ.