ನಗರ ಹಾಗೂ ಗ್ರಾಮೀಣ ಜನರಿಗೆ ವಾಹನ ತಪಾಸಣೆ ನೆಪದಲ್ಲಿ ಇನ್ನಿಲ್ಲದ ಕಿರುಕುಳ ನೀಡಿ ದಂಡ ವಿಧಿಸುತ್ತಿದ್ದೀರಿ. ಒಂದೇ ಹೆದ್ದಾರಿಯಲ್ಲಿ ನಾಲ್ಕಾರು ಕಡೆ ಗುಂಪು ಕಟ್ಟಿ ನಿಂತು ಜನರನ್ನು ಹೆದರಿಸುತ್ತೀರಿ? ಬರೀ ದಂಡ ವಿಧಿಸುವುದಷ್ಟೇ ನಿಮ್ಮ ಕೆಲಸವೇ? ಇನ್ನಾದರೂ ಪೊಲೀಸರು ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾನೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮುಂಭಾಗ ಜನರೊಂದಿಗೆ ಧರಣಿ ಕೂರುತ್ತೇನೆ. ಈ ಬಗ್ಗೆ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇನೆ ಎಂದು ಎಚ್ಚರಿಸಿದರು.