<p><strong>ಮಾಗಡಿ</strong>: ಕೆ-ಶಿಫ್ ವತಿಯಿಂದ ಕೈಗೆತ್ತಿಕೊಂಡಿರುವ ಬೆಂಗಳೂರು ನೈಸ್ ರಸ್ತೆಯಿಂದ ಮಾಗಡಿ ಮಾರ್ಗವಾಗಿ ಸೋಮವಾರಪೇಟೆವರೆಗಿನ ಚತುಷ್ಪಥ (ನಾಲ್ಕು ಪಥದ) ರಸ್ತೆ ಕಾಮಗಾರಿ ಕಳೆದ ಏಳು ವರ್ಷಗಳಿಂದ ಆಮೆಗತಿಯಲ್ಲಿ ಕುಂಟುತ್ತಾ ಸಾಗುತ್ತಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.</p>.<p>ಬೇಸಿಗೆಯಲ್ಲಿ ದೂಳಿನ ಅಬ್ಬರಕ್ಕೆ ಸಿಲುಕಿ ಹೈರಾಣಾಗಿದ್ದ ದ್ವಿಚಕ್ರ ವಾಹನ ಸವಾರರು, ಈಗ ಮಳೆಗಾಲ ಆರಂಭವಾಗುತ್ತಿರುವುದರಿಂದ ರಸ್ತೆಯುದ್ದಕ್ಕೂ ಸೃಷ್ಟಿಯಾಗಿರುವ ಕೆಸರು ಗದ್ದೆಯಲ್ಲಿ ಸಂಚರಿಸಲಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಾಗಡಿಯಿಂದ ಕೇವಲ 45 ಕಿ.ಮೀ. ದೂರದ ಈ ರಸ್ತೆ ಕಾಮಗಾರಿಯನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಕೆಲಸ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.</p>.<p><strong>ನಿತ್ಯಗೋಳು:</strong> ಬೆಂಗಳೂರು ಗೊಲ್ಲರಹಟ್ಟಿ ನೈಸ್ ರಸ್ತೆಯಿಂದ ಮಾಗಡಿ ಪಟ್ಟಣದವರೆಗೆ ಒಂದು ಏಜೆನ್ಸಿಗೆ ಹಾಗೂ ಮಾಗಡಿಯಿಂದ ಹುಲಿಯೂರು ದುರ್ಗದವರೆಗೆ ಮತ್ತೊಂದು ಏಜೆನ್ಸಿಗೆ ಕಾಮಗಾರಿ ಜವಾಬ್ದಾರಿ ನೀಡಲಾಗಿತ್ತು. ಹುಲಿಯೂರುದುರ್ಗ ಮಾರ್ಗದ ರಸ್ತೆ ಕಾಮಗಾರಿ ಶೇ90ರಷ್ಟು ಪೂರ್ಣಗೊಂಡಿದೆ. ಅರಣ್ಯ ಪ್ರದೇಶದ ಸ್ವಲ್ಪ ಭಾಗ ಮಾತ್ರ ಬಾಕಿ ಉಳಿದಿದೆ. ಆದರೆ, ಮಾಗಡಿ-ಬೆಂಗಳೂರು ಮಾರ್ಗದ ರಸ್ತೆ ಕಾಮಗಾರಿ ಮಾತ್ರ ದೂಳು ಹಿಡಿಯುತ್ತಿದೆ. ತಾಲ್ಲೂಕಿನ ಚಿಕ್ಕತೋರೆಪಾಳ್ಯದ ಬಳಿ ಸೇತುವೆ ಕಾಮಗಾರಿ ಇನ್ನು ಮುಗಿದಿಲ್ಲ. ತಿಪ್ಪನಹಳ್ಳಿ ಬಳಿ ಹೊಸ ಸೇತುವೆ ನಿರ್ಮಿಸಲಾಗಿದ್ದರೂ, ಇನ್ನುಳಿದಂತೆ ಹಲವು ಕಡೆ ರಸ್ತೆ ಸರಿಪಡಿಸುವ ಕೆಲಸ ನಡೆದಿಲ್ಲ. ಇದರಿಂದಾಗಿ ಕುಣಿಗಲ್, ಹಾಸನ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಮೈಸೂರು, ಮಡಿಕೇರಿ ಮುಂತಾದ ಕಡೆಗೆ ಸಂಚರಿಸುವ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.</p>.<p><strong>ವ್ಯಾಪಾರಿಗಳಿಗೆ ಕಿರಿಕಿರಿ:</strong> ಪಟ್ಟಣದ ಸೋಮೇಶ್ವರ ಬಡಾವಣೆ ಮುಖ್ಯರಸ್ತೆ ಒಂದು ಭಾಗದಲ್ಲಿ ಮೂರು ತಿಂಗಳ ಹಿಂದೆ ಡಾಂಬರು ಹಾಕಿದ್ದನ್ನು ಬಿಟ್ಟರೆ ಕಲ್ಯಾಗೇಟ್ ವೃತ್ತದಿಂದ ಹೊಸಪೇಟೆ ವೃತ್ತದವರೆಗಿನ ಕಾಮಗಾರಿ ನನೆಗುದಿಗೆ ಬಿದ್ದಿದೆ. ರಸ್ತೆಬದಿ ಅಂಗಡಿಗಳನ್ನು ತೆರವುಗೊಳಿಸಿ ಹೊಸ ಅಂಗಡಿಗಳನ್ನು ಕಟ್ಟಿಕೊಂಡಿದ್ದರೂ ರಸ್ತೆ ಮಾತ್ರ ಪೂರ್ಣಗೊಂಡಿಲ್ಲ. ರಜಾ ದಿನಗಳಾದ ಶನಿವಾರ ಮತ್ತು ಭಾನುವಾರ ವಾಹನ ದಟ್ಟಣೆ ಹೆಚ್ಚಿರುವುದರಿಂದ ದಟ್ಟಣೆ ಮತ್ತು ದೂಳಿನ ಸಮಸ್ಯೆ ಉಂಟಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು ಅಂಗಡಿ ಮಾಲೀಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<p><strong>ಮೃತ್ಯುಕೂಪವಾದ ರಸ್ತೆ:</strong> ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಈ ಮಾರ್ಗ ಈಗ ಅಪಘಾತಗಳ ವಲಯವಾಗಿ ಮಾರ್ಪಟ್ಟಿದೆ. ಪೊಲೀಸ್ ಠಾಣೆ ದಾಖಲೆಗಳ ಪ್ರಕಾರ, ಕಳೆದ ಮೂರು ವರ್ಷಗಳ ಅವಧಿಯಲ್ಲಿ (2024 ರಿಂದ 2026ರವರೆಗೆ) ಮಾಗಡಿ-ಕುಣಿಗಲ್ ಮಾರ್ಗ: ಅಪಘಾತಗಳಲ್ಲಿ 17 ಜನ ಮೃತಪಟ್ಟಿದ್ದಾರೆ. 46 ಜನ ಗಾಯಗೊಂಡಿದ್ದಾರೆ. ಮಾಗಡಿ-ಹುಲಿಯೂರುದುರ್ಗ ಮಾರ್ಗ: 21 ಜನ ಮೃತಪಟ್ಟಿದ್ದಾರೆ. 49 ಜನ ಗಾಯಗೊಂಡಿದ್ದಾರೆ. ಒಟ್ಟು ಸಾವು: ಎರಡು ಮಾರ್ಗಗಳಿಂದ 38 ವಾಹನ ಸವಾರರು ಬಲಿಯಾಗಿದ್ದಾರೆ.</p>.<p>ಕಳೆದ ಹೊಸ ವರ್ಷದ ದಿನದಂದು ಹುಚ್ಚ ಹನುಮಗೌಡನಪಾಳ್ಯದ ತಿರುವಿನ ಬಳಿ ರಸ್ತೆ ಕಾಣಿಸದೆ ಕಾರು ಹಳ್ಳಕ್ಕೆ ಬಿದ್ದು ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಇದೇ ಜಾಗದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬಿನಿಂದಾಗಿ ಶಾಲಾ ಬಸ್ನಿಂದ ಬಿದ್ದು ಮಗುವೊಂದು ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಇಷ್ಟಾದರೂ ಅಧಿಕಾರಿಗಳು ತಿರುವಿನಲ್ಲಿ ಡಾಂಬರು ಹಾಕದೆ ಕೇವಲ ವೇಗ ನಿಯಂತ್ರಕ ಅಳವಡಿಸಿ ಸುಮ್ಮನಾಗಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-14-1296232458</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ಕೆ-ಶಿಫ್ ವತಿಯಿಂದ ಕೈಗೆತ್ತಿಕೊಂಡಿರುವ ಬೆಂಗಳೂರು ನೈಸ್ ರಸ್ತೆಯಿಂದ ಮಾಗಡಿ ಮಾರ್ಗವಾಗಿ ಸೋಮವಾರಪೇಟೆವರೆಗಿನ ಚತುಷ್ಪಥ (ನಾಲ್ಕು ಪಥದ) ರಸ್ತೆ ಕಾಮಗಾರಿ ಕಳೆದ ಏಳು ವರ್ಷಗಳಿಂದ ಆಮೆಗತಿಯಲ್ಲಿ ಕುಂಟುತ್ತಾ ಸಾಗುತ್ತಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.</p>.<p>ಬೇಸಿಗೆಯಲ್ಲಿ ದೂಳಿನ ಅಬ್ಬರಕ್ಕೆ ಸಿಲುಕಿ ಹೈರಾಣಾಗಿದ್ದ ದ್ವಿಚಕ್ರ ವಾಹನ ಸವಾರರು, ಈಗ ಮಳೆಗಾಲ ಆರಂಭವಾಗುತ್ತಿರುವುದರಿಂದ ರಸ್ತೆಯುದ್ದಕ್ಕೂ ಸೃಷ್ಟಿಯಾಗಿರುವ ಕೆಸರು ಗದ್ದೆಯಲ್ಲಿ ಸಂಚರಿಸಲಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಾಗಡಿಯಿಂದ ಕೇವಲ 45 ಕಿ.ಮೀ. ದೂರದ ಈ ರಸ್ತೆ ಕಾಮಗಾರಿಯನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಕೆಲಸ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.</p>.<p><strong>ನಿತ್ಯಗೋಳು:</strong> ಬೆಂಗಳೂರು ಗೊಲ್ಲರಹಟ್ಟಿ ನೈಸ್ ರಸ್ತೆಯಿಂದ ಮಾಗಡಿ ಪಟ್ಟಣದವರೆಗೆ ಒಂದು ಏಜೆನ್ಸಿಗೆ ಹಾಗೂ ಮಾಗಡಿಯಿಂದ ಹುಲಿಯೂರು ದುರ್ಗದವರೆಗೆ ಮತ್ತೊಂದು ಏಜೆನ್ಸಿಗೆ ಕಾಮಗಾರಿ ಜವಾಬ್ದಾರಿ ನೀಡಲಾಗಿತ್ತು. ಹುಲಿಯೂರುದುರ್ಗ ಮಾರ್ಗದ ರಸ್ತೆ ಕಾಮಗಾರಿ ಶೇ90ರಷ್ಟು ಪೂರ್ಣಗೊಂಡಿದೆ. ಅರಣ್ಯ ಪ್ರದೇಶದ ಸ್ವಲ್ಪ ಭಾಗ ಮಾತ್ರ ಬಾಕಿ ಉಳಿದಿದೆ. ಆದರೆ, ಮಾಗಡಿ-ಬೆಂಗಳೂರು ಮಾರ್ಗದ ರಸ್ತೆ ಕಾಮಗಾರಿ ಮಾತ್ರ ದೂಳು ಹಿಡಿಯುತ್ತಿದೆ. ತಾಲ್ಲೂಕಿನ ಚಿಕ್ಕತೋರೆಪಾಳ್ಯದ ಬಳಿ ಸೇತುವೆ ಕಾಮಗಾರಿ ಇನ್ನು ಮುಗಿದಿಲ್ಲ. ತಿಪ್ಪನಹಳ್ಳಿ ಬಳಿ ಹೊಸ ಸೇತುವೆ ನಿರ್ಮಿಸಲಾಗಿದ್ದರೂ, ಇನ್ನುಳಿದಂತೆ ಹಲವು ಕಡೆ ರಸ್ತೆ ಸರಿಪಡಿಸುವ ಕೆಲಸ ನಡೆದಿಲ್ಲ. ಇದರಿಂದಾಗಿ ಕುಣಿಗಲ್, ಹಾಸನ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಮೈಸೂರು, ಮಡಿಕೇರಿ ಮುಂತಾದ ಕಡೆಗೆ ಸಂಚರಿಸುವ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.</p>.<p><strong>ವ್ಯಾಪಾರಿಗಳಿಗೆ ಕಿರಿಕಿರಿ:</strong> ಪಟ್ಟಣದ ಸೋಮೇಶ್ವರ ಬಡಾವಣೆ ಮುಖ್ಯರಸ್ತೆ ಒಂದು ಭಾಗದಲ್ಲಿ ಮೂರು ತಿಂಗಳ ಹಿಂದೆ ಡಾಂಬರು ಹಾಕಿದ್ದನ್ನು ಬಿಟ್ಟರೆ ಕಲ್ಯಾಗೇಟ್ ವೃತ್ತದಿಂದ ಹೊಸಪೇಟೆ ವೃತ್ತದವರೆಗಿನ ಕಾಮಗಾರಿ ನನೆಗುದಿಗೆ ಬಿದ್ದಿದೆ. ರಸ್ತೆಬದಿ ಅಂಗಡಿಗಳನ್ನು ತೆರವುಗೊಳಿಸಿ ಹೊಸ ಅಂಗಡಿಗಳನ್ನು ಕಟ್ಟಿಕೊಂಡಿದ್ದರೂ ರಸ್ತೆ ಮಾತ್ರ ಪೂರ್ಣಗೊಂಡಿಲ್ಲ. ರಜಾ ದಿನಗಳಾದ ಶನಿವಾರ ಮತ್ತು ಭಾನುವಾರ ವಾಹನ ದಟ್ಟಣೆ ಹೆಚ್ಚಿರುವುದರಿಂದ ದಟ್ಟಣೆ ಮತ್ತು ದೂಳಿನ ಸಮಸ್ಯೆ ಉಂಟಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು ಅಂಗಡಿ ಮಾಲೀಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<p><strong>ಮೃತ್ಯುಕೂಪವಾದ ರಸ್ತೆ:</strong> ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಈ ಮಾರ್ಗ ಈಗ ಅಪಘಾತಗಳ ವಲಯವಾಗಿ ಮಾರ್ಪಟ್ಟಿದೆ. ಪೊಲೀಸ್ ಠಾಣೆ ದಾಖಲೆಗಳ ಪ್ರಕಾರ, ಕಳೆದ ಮೂರು ವರ್ಷಗಳ ಅವಧಿಯಲ್ಲಿ (2024 ರಿಂದ 2026ರವರೆಗೆ) ಮಾಗಡಿ-ಕುಣಿಗಲ್ ಮಾರ್ಗ: ಅಪಘಾತಗಳಲ್ಲಿ 17 ಜನ ಮೃತಪಟ್ಟಿದ್ದಾರೆ. 46 ಜನ ಗಾಯಗೊಂಡಿದ್ದಾರೆ. ಮಾಗಡಿ-ಹುಲಿಯೂರುದುರ್ಗ ಮಾರ್ಗ: 21 ಜನ ಮೃತಪಟ್ಟಿದ್ದಾರೆ. 49 ಜನ ಗಾಯಗೊಂಡಿದ್ದಾರೆ. ಒಟ್ಟು ಸಾವು: ಎರಡು ಮಾರ್ಗಗಳಿಂದ 38 ವಾಹನ ಸವಾರರು ಬಲಿಯಾಗಿದ್ದಾರೆ.</p>.<p>ಕಳೆದ ಹೊಸ ವರ್ಷದ ದಿನದಂದು ಹುಚ್ಚ ಹನುಮಗೌಡನಪಾಳ್ಯದ ತಿರುವಿನ ಬಳಿ ರಸ್ತೆ ಕಾಣಿಸದೆ ಕಾರು ಹಳ್ಳಕ್ಕೆ ಬಿದ್ದು ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಇದೇ ಜಾಗದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬಿನಿಂದಾಗಿ ಶಾಲಾ ಬಸ್ನಿಂದ ಬಿದ್ದು ಮಗುವೊಂದು ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಇಷ್ಟಾದರೂ ಅಧಿಕಾರಿಗಳು ತಿರುವಿನಲ್ಲಿ ಡಾಂಬರು ಹಾಕದೆ ಕೇವಲ ವೇಗ ನಿಯಂತ್ರಕ ಅಳವಡಿಸಿ ಸುಮ್ಮನಾಗಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-14-1296232458</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>