<p><strong>ರಾಮನಗರ:</strong> ಯುಗಾದಿ ಹಬ್ಬ, ಮಾವು ಫಸಲು ಕುಸಿತ ಹಾಗೂ ಮಳೆ ಕೊರತೆಯ ಆತಂಕದಲ್ಲಿರುವ ರೈತರಿಗೆ ನೆರವಾಗುವುದಕ್ಕಾಗಿ ಅಂಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ₹1 ಪ್ರೋತ್ಸಾಹಧನವನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷೆ ಪವಿತ್ರ ಎಸ್. ಮಹೇಶ್ ಹೇಳಿದರು.</p>.<p>‘ರೈತರಿಗೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳೇ ಆರ್ಥಿಕವಾಗಿ ಪ್ರಗತಿಗೆ ಆಸರೆಯಾಗಿವೆ. ಈ ವರ್ಷ ಮಾವು ಫಸಲು ಕೂಡ ಬಂದಿಲ್ಲ. ಇದರಿಂದರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹೈನುಗಾರಿಕೆಗೂ ಮಳೆ ಅಭಾವದಿಂದ ಹಸಿರು ಮೇವು, ಜಾನುವಾರು ಫೀಡ್ ಮೇವಿನ ಬೆಲೆ ದುಪ್ಪಟ್ಟಾಗಿದೆ’ ಎಂದು ತಾಲ್ಲೂಕಿನ ಅಂಕನಹಳ್ಲಿಯಲ್ಲಿರುವ ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಒಂದು ಕಂತೆ ಮೇವಿನ ದರ ₹300 ತಲುಪಿದೆ. ಸಂಘ ಪ್ರತಿ ವರ್ಷ ಸುಮಾರು ₹15 ಲಕ್ಷದವರೆಗೆ ಲಾಭ ಗಳಿಸುತ್ತಾ ಬಂದಿದೆ. ಲಾಭದಲ್ಲಿ ಪ್ರತಿ ವರ್ಷ ಬೋನಸ್ವಿತರಿಸಲಗುತ್ತಿದೆ. ಈ ವರ್ಷ ವಿಶೇಷವಾಗಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರ ಪ್ರೇರಣೆಯಿಂದ ಸಂಘಕ್ಕೆ 167 ಹಾಲು ಉತ್ಪಾದಕ ರೈತರು 9.78 ಲಕ್ಷ ಲೀಟರ್ ಹಾಲು ಸರಬರಾಜು ಮಾಡಿದ್ದಾರೆ. ಅವರಿಗೆ ಹಬ್ಬದ ವಿಶೇಷವಾಗಿ ಸಂಘದ ಲಾಭದ ಹಣದಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದರು.</p>.<p>‘ಪ್ರೋತ್ಸಾಹಧನನ್ನು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಜೊತೆಗೆ ಸಂಘದ ಮೂವರು ಸಿಬ್ಬಂದಿ ತಲಾ ₹5 ಸಾವಿರದಂತೆ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ರೈತರಿಗೆ ಹೆಚ್ಚುವರಿ ಪ್ರೋತ್ಸಾಹಧನದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಸಂಘ ಬಿಡಿಸಿಸಿ ಬ್ಯಾಂಕ್ ಮತ್ತು ಇತರೆ ಕಡೆ ಸುಮಾರು ₹50 ಲಕ್ಷದಷ್ಟು ಹಣ ಇರಿಸಿದೆ. ಸಂಘ ಲಾಭದಾಯಕವಾಗಿ ಮನ್ನಡೆಯುತ್ತಿರುವ ಕಾರಣ ಆಡಳಿತ ಮಂಡಳಿಒಪ್ಪಿಗೆಯಂತೆ ಹಾಲು ಉತ್ಪಾದಕರ ರೈತರಿಗೆ ಈ ಒಂದು ಸಮಯದಲ್ಲಿ ನೆರವು ನೀಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಸಂಘದ ಉಪಾಧ್ಯಕ್ಷ ಡಿ. ನಾಗರಾಜು, ನಿರ್ದೇಶಕರಾದ ಬಿ. ಚಂದ್ರು, ಎ. ಗೋಪಿ, ಕೆ. ಶಿವರಾಮು, ಕೆ. ರಮೇಶ್, ಎಲ್. ರಾಮಯ್ಯ, ಪಿ. ರಮೇಶ್, ಕಾರ್ಯದರ್ಶಿ ಜಿ. ಯೋಗಾನಂದ, ಹಾಲು ಪರೀಕ್ಷಕ ಕೆಂಪೇಗೌಡ, ಎಸ್. ಪ್ರಸಾದ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260321-15-1262090495</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಯುಗಾದಿ ಹಬ್ಬ, ಮಾವು ಫಸಲು ಕುಸಿತ ಹಾಗೂ ಮಳೆ ಕೊರತೆಯ ಆತಂಕದಲ್ಲಿರುವ ರೈತರಿಗೆ ನೆರವಾಗುವುದಕ್ಕಾಗಿ ಅಂಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ₹1 ಪ್ರೋತ್ಸಾಹಧನವನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷೆ ಪವಿತ್ರ ಎಸ್. ಮಹೇಶ್ ಹೇಳಿದರು.</p>.<p>‘ರೈತರಿಗೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಗಳೇ ಆರ್ಥಿಕವಾಗಿ ಪ್ರಗತಿಗೆ ಆಸರೆಯಾಗಿವೆ. ಈ ವರ್ಷ ಮಾವು ಫಸಲು ಕೂಡ ಬಂದಿಲ್ಲ. ಇದರಿಂದರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹೈನುಗಾರಿಕೆಗೂ ಮಳೆ ಅಭಾವದಿಂದ ಹಸಿರು ಮೇವು, ಜಾನುವಾರು ಫೀಡ್ ಮೇವಿನ ಬೆಲೆ ದುಪ್ಪಟ್ಟಾಗಿದೆ’ ಎಂದು ತಾಲ್ಲೂಕಿನ ಅಂಕನಹಳ್ಲಿಯಲ್ಲಿರುವ ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಒಂದು ಕಂತೆ ಮೇವಿನ ದರ ₹300 ತಲುಪಿದೆ. ಸಂಘ ಪ್ರತಿ ವರ್ಷ ಸುಮಾರು ₹15 ಲಕ್ಷದವರೆಗೆ ಲಾಭ ಗಳಿಸುತ್ತಾ ಬಂದಿದೆ. ಲಾಭದಲ್ಲಿ ಪ್ರತಿ ವರ್ಷ ಬೋನಸ್ವಿತರಿಸಲಗುತ್ತಿದೆ. ಈ ವರ್ಷ ವಿಶೇಷವಾಗಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರ ಪ್ರೇರಣೆಯಿಂದ ಸಂಘಕ್ಕೆ 167 ಹಾಲು ಉತ್ಪಾದಕ ರೈತರು 9.78 ಲಕ್ಷ ಲೀಟರ್ ಹಾಲು ಸರಬರಾಜು ಮಾಡಿದ್ದಾರೆ. ಅವರಿಗೆ ಹಬ್ಬದ ವಿಶೇಷವಾಗಿ ಸಂಘದ ಲಾಭದ ಹಣದಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದರು.</p>.<p>‘ಪ್ರೋತ್ಸಾಹಧನನ್ನು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಜೊತೆಗೆ ಸಂಘದ ಮೂವರು ಸಿಬ್ಬಂದಿ ತಲಾ ₹5 ಸಾವಿರದಂತೆ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ರೈತರಿಗೆ ಹೆಚ್ಚುವರಿ ಪ್ರೋತ್ಸಾಹಧನದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಸಂಘ ಬಿಡಿಸಿಸಿ ಬ್ಯಾಂಕ್ ಮತ್ತು ಇತರೆ ಕಡೆ ಸುಮಾರು ₹50 ಲಕ್ಷದಷ್ಟು ಹಣ ಇರಿಸಿದೆ. ಸಂಘ ಲಾಭದಾಯಕವಾಗಿ ಮನ್ನಡೆಯುತ್ತಿರುವ ಕಾರಣ ಆಡಳಿತ ಮಂಡಳಿಒಪ್ಪಿಗೆಯಂತೆ ಹಾಲು ಉತ್ಪಾದಕರ ರೈತರಿಗೆ ಈ ಒಂದು ಸಮಯದಲ್ಲಿ ನೆರವು ನೀಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಸಂಘದ ಉಪಾಧ್ಯಕ್ಷ ಡಿ. ನಾಗರಾಜು, ನಿರ್ದೇಶಕರಾದ ಬಿ. ಚಂದ್ರು, ಎ. ಗೋಪಿ, ಕೆ. ಶಿವರಾಮು, ಕೆ. ರಮೇಶ್, ಎಲ್. ರಾಮಯ್ಯ, ಪಿ. ರಮೇಶ್, ಕಾರ್ಯದರ್ಶಿ ಜಿ. ಯೋಗಾನಂದ, ಹಾಲು ಪರೀಕ್ಷಕ ಕೆಂಪೇಗೌಡ, ಎಸ್. ಪ್ರಸಾದ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260321-15-1262090495</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>