<p><strong>ರಾಮನಗರ:</strong> ಇಲ್ಲಿನ ನಗರಸಭೆಯ ವಾರ್ಡ್–22ರ ಸದಸ್ಯ ಹಾಗೂ ರೌಡಿ ಶೀಟರ್ ಅಜ್ಮತ್ ಉಲ್ಲಾ ಖಾನ್ ಅವರನ್ನು ನಗರದ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಮೂವರು ರೌಡಿಗಳ ಗುಂಪೊಂದು ಅಡ್ಡಗಟ್ಟಿ ಕೊಲೆಗೆ ಯತ್ನಿಸಿದೆ. ರೌಡಿಗಳು ಬೀಸಿದ ಲಾಂಗ್ನಿಂದ ಕೂದಲೆಳೆ ಅಂತರದಲ್ಲಿ ಅಜ್ಮತ್ ಪಾರಾಗಿದ್ದಾರೆ.</p>.<p>ಸೇತುವೆ ಬಳಿ ತಪ್ಪಿಸಿಕೊಂಡ ಅಜ್ಮತ್ ಅವರನ್ನು ರೌಡಿಗಳು ಗೂಬೆ ಕಾಲೊನಿ (ಜನತಾ ಕಾಲೊನಿ) ಬಳಿ ಇರುವ ಮನೆಗೆ ಹುಡುಕಿಕೊಂಡು ಬಂದಿದ್ದಾರೆ. ಮನೆಯಲ್ಲಿ ಇಲ್ಲದಿದ್ದರಿಂದ ಕುಪಿತಗೊಂಡ ರೌಡಿಗಳು ಮನೆ ಮುಂದೆ ನಿಲ್ಲಿಸಿದ್ದ ಕಾರು, ದ್ವಿಚಕ್ರ ವಾಹನಗಳಿಗೆ ಹಾಗೂ ಮನೆ ಕಿಟಕಿಗಳಿಗೆ ಮಾರಕಾಸ್ತ್ರಗಳಿಂದ ಹೊಡೆದು ದಾಂದಲೆ ನಡೆಸಿದ್ದಾರೆ.</p>.<p><strong>ಬೈಕ್ನಿಂದ ಗುದ್ದಿದರು:</strong> ಕಾರ್ಯನಿಮಿತ್ತ ನಗರಸಭೆಗೆ ಬಂದಿದ್ದ ಅಜ್ಮತ್, ಸಂಜೆ 4.30ರ ಸುಮಾರಿಗೆ ಸ್ಕೂಟರ್ನಲ್ಲಿ ಮನೆ ಕಡೆಗೆ ಹೊರಟಿದ್ದರು. ರೈಲು ನಿಲ್ದಾಣ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟಿನ್ ಬಳಿ ಮಾರಕಾಸ್ತ್ರಗಳೊಂದಿಗೆ ಕಾದು ಕುಳಿತಿದ್ದ ರೌಡಿಗಳು, ಅಜ್ಮತ್ ಅವರನ್ನು ಎರಡು ಸ್ಕೂಟರ್ಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ರಾಮನಗರ ಟೌನ್ ಠಾಣೆ ಪೊಲೀಸರು ತಿಳಿಸಿದರು.</p>.<p>ಅಜ್ಮತ್ ರೈಲ್ವೆ ಕೆಳ ಸೇತುವೆ ಪ್ರವೇಶಿಸುತ್ತಿದ್ದಂತೆ ರೌಡಿಗಳು ಹಿಂದಿನಿಂದ ಬಂದು ಗುದ್ದಿದ್ದಾರೆ. ಕೆಳಕ್ಕೆ ಬಿದ್ದ ಅಜ್ಮತ್ ಮೇಲೆ ಲಾಂಗ್ ಬೀಸಿದ್ದಾರೆ. ಏಟಿನಿಂದ ತಪ್ಪಿಸಿಕೊಂಡ ಅಜ್ಮತ್, ಪಕ್ಕದ ದರ್ಗಾ ಕಡೆಗೆ ಓಡಿ ಹೋಗಿದ್ದಾರೆ. ಅಟ್ಟಿಸಿಕೊಂಡು ಬಂದ ರೌಡಿಗಳ ಕೈಗೆ ಸಿಗದೆ ಗೌಸಿಯಾ ನಗರದ ಮನೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.</p>.<p><strong>ಮಾರಕಾಸ್ತ್ರ ಪ್ರದರ್ಶನ: </strong>ನಂತರ ರೌಡಿಗಳು ಅಜ್ಮತ್ ಸ್ಕೂಟರ್ನಲ್ಲೇ ಮಾರಕಾಸ್ತ್ರಗಳನ್ನು ರಸ್ತೆಯಲ್ಲಿ ಪ್ರದರ್ಶಿಸುತ್ತಾ ಅವರ ಮನೆಗೆ ಬಂದಿದ್ದಾರೆ. ಅಜ್ಮತ್ ಅವರನ್ನು ಕೆಟ್ಟದಾಗಿ ನಿಂದಿಸುತ್ತಾ ಮಾರಕಾಸ್ತ್ರಗಳಿಂದ ಮನೆಯೊಳಕ್ಕೆ ನುಗ್ಗಲು ಯತ್ನಿಸಿದ್ದಾರೆ. ಆಗ, ಮನೆಯಲ್ಲಿದ್ದ ಮಹಿಳೆ ಕೂಡಲೇ ಒಳಗಿನಿಂದ ಗೇಟ್ ಹಾಕಿಕೊಂಡಿದ್ದಾರೆ. ಮಹಿಳೆಗೂ ನಿಂದಿಸಿರುವ ರೌಡಿಗಳು ಮನೆ ಮುಂದಿದ್ದ ವಾಹನಗಳ ಗಾಜು ಒಡೆದು ದಾಂದಲೆ ನಡೆಸಿ, ಅಜ್ಮತ್ ಸ್ಕೂಟರ್ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.</p>.<p>ವಿಷಯ ತಿಳಿದ ಕೂಡಲೇ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಕೆಲ ಹೊತ್ತಿನ ನಂತರ ಅಜ್ಮತ್ ಠಾಣೆಗೆ ಬಂದು ತಮ್ಮ ಮೇಲೆ ನಡೆದ ಕೊಲೆ ಯತ್ನದ ಕುರಿತು ದೂರು ಕೊಟ್ಟಿದ್ದಾರೆ. ಆ ಮೇರೆಗೆ ಕವಾಲಿ, ಆಸಿಫ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.</p>.<p>Quote - ನಗರಸಭೆ ಸದಸ್ಯ ಅಜ್ಮತ್ಉಲ್ಲಾ ಖಾನ್ ಅವರ ಮೇಲೆ ಸ್ಥಳೀಯ ಯುವಕರೇ ಕೊಲೆಗೆ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಜಿ.ಪಿ. ರಮೇಶ್ ಸರ್ಕಲ್ ಇನ್ಸ್ಪೆಕ್ಟರ್ ರಾಮನಗರ ವೃತ್ತ</p>.<p>Cut-off box - ಶಿಷ್ಯ ಕವಾಲಿ ಕೃತ್ಯ ರಾಮನಗರ ಟೌನ್ ಠಾಣೆಯ ರೌಡಿ ಶೀಟರ್ ಆಗಿರುವ ಅಜ್ಮತ್ ಕೊಲೆ ಯತ್ನ ನಡೆಸಿರುವುದು ಆತನ ಶಿಷ್ಯ ಹಾಗೂ ಟೌನ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಕವಾಲಿ!. ಇಬ್ಬರ ನಡುವೆ ಯಾವುದೇ ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು. ಅದೇ ದ್ವೇಷಕ್ಕೆ ತನ್ನ ಸಹಚರರಾದ ಆಸಿಫ್ ಹಾಗೂ ಮತ್ತೊಬ್ಬನ ಜೊತೆಗೂಡಿ ಕೊಲೆ ಯತ್ನ ನಡೆಸಿದ್ದಾನೆ. ಕವಾಲಿ ಮತ್ತು ಆತನ ಸಹಚರರ ವಿರುದ್ಧ ರಾಮನಗರವಷ್ಟೇ ಅಲ್ಲದೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಿಂದೆಯೂ ಕೊಲೆ ಯತ್ನ ನಡೆದಿತ್ತು ಅಜ್ಮತ್ ಸಹ 10 ವರ್ಷಗಳ ಹಿಂದೆ ಕೊಲೆಯಾಗಿದ್ದ ರೌಡಿ ಶೀಟರ್ ಹಾಗೂ ಮಾಜಿ ನಗರಸಭೆ ಸದಸ್ಯ ಮಹಮ್ಮದ್ ನಿಜಾಂ ಪಾಷ ಶಿಷ್ಯ. ಅಜ್ಮತ್ ವಿರುದ್ಧ ಟೌನ್ ಠಾಣೆಯಲ್ಲಿ ವಿವಿಧ ಪ್ರಕರಣಗಳಿವೆ. ನಿಜಾಂ ಕೊಲೆ ಬಳಿಕ ಅಜ್ಮತ್ ಮೇಲೂ ನಾಲ್ಕೈದು ಸಲ ಕೊಲೆ ಯತ್ನಗಳು ನಡೆದಿವೆ. ತನ್ನ ಗುರು ಸಾವಿನ ಬಳಿಕ ಅಜ್ಮತ್ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು. ನಗರಸಭೆ ಚುನಾವಣೆಯಲ್ಲಿ ವಾರ್ಡ್–22ರಿಂದ ಟಿಕೆಟ್ ಪಡೆದು ಸ್ಪರ್ಧಿಸಿ ಗೆದ್ದಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಇಲ್ಲಿನ ನಗರಸಭೆಯ ವಾರ್ಡ್–22ರ ಸದಸ್ಯ ಹಾಗೂ ರೌಡಿ ಶೀಟರ್ ಅಜ್ಮತ್ ಉಲ್ಲಾ ಖಾನ್ ಅವರನ್ನು ನಗರದ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಮೂವರು ರೌಡಿಗಳ ಗುಂಪೊಂದು ಅಡ್ಡಗಟ್ಟಿ ಕೊಲೆಗೆ ಯತ್ನಿಸಿದೆ. ರೌಡಿಗಳು ಬೀಸಿದ ಲಾಂಗ್ನಿಂದ ಕೂದಲೆಳೆ ಅಂತರದಲ್ಲಿ ಅಜ್ಮತ್ ಪಾರಾಗಿದ್ದಾರೆ.</p>.<p>ಸೇತುವೆ ಬಳಿ ತಪ್ಪಿಸಿಕೊಂಡ ಅಜ್ಮತ್ ಅವರನ್ನು ರೌಡಿಗಳು ಗೂಬೆ ಕಾಲೊನಿ (ಜನತಾ ಕಾಲೊನಿ) ಬಳಿ ಇರುವ ಮನೆಗೆ ಹುಡುಕಿಕೊಂಡು ಬಂದಿದ್ದಾರೆ. ಮನೆಯಲ್ಲಿ ಇಲ್ಲದಿದ್ದರಿಂದ ಕುಪಿತಗೊಂಡ ರೌಡಿಗಳು ಮನೆ ಮುಂದೆ ನಿಲ್ಲಿಸಿದ್ದ ಕಾರು, ದ್ವಿಚಕ್ರ ವಾಹನಗಳಿಗೆ ಹಾಗೂ ಮನೆ ಕಿಟಕಿಗಳಿಗೆ ಮಾರಕಾಸ್ತ್ರಗಳಿಂದ ಹೊಡೆದು ದಾಂದಲೆ ನಡೆಸಿದ್ದಾರೆ.</p>.<p><strong>ಬೈಕ್ನಿಂದ ಗುದ್ದಿದರು:</strong> ಕಾರ್ಯನಿಮಿತ್ತ ನಗರಸಭೆಗೆ ಬಂದಿದ್ದ ಅಜ್ಮತ್, ಸಂಜೆ 4.30ರ ಸುಮಾರಿಗೆ ಸ್ಕೂಟರ್ನಲ್ಲಿ ಮನೆ ಕಡೆಗೆ ಹೊರಟಿದ್ದರು. ರೈಲು ನಿಲ್ದಾಣ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟಿನ್ ಬಳಿ ಮಾರಕಾಸ್ತ್ರಗಳೊಂದಿಗೆ ಕಾದು ಕುಳಿತಿದ್ದ ರೌಡಿಗಳು, ಅಜ್ಮತ್ ಅವರನ್ನು ಎರಡು ಸ್ಕೂಟರ್ಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ರಾಮನಗರ ಟೌನ್ ಠಾಣೆ ಪೊಲೀಸರು ತಿಳಿಸಿದರು.</p>.<p>ಅಜ್ಮತ್ ರೈಲ್ವೆ ಕೆಳ ಸೇತುವೆ ಪ್ರವೇಶಿಸುತ್ತಿದ್ದಂತೆ ರೌಡಿಗಳು ಹಿಂದಿನಿಂದ ಬಂದು ಗುದ್ದಿದ್ದಾರೆ. ಕೆಳಕ್ಕೆ ಬಿದ್ದ ಅಜ್ಮತ್ ಮೇಲೆ ಲಾಂಗ್ ಬೀಸಿದ್ದಾರೆ. ಏಟಿನಿಂದ ತಪ್ಪಿಸಿಕೊಂಡ ಅಜ್ಮತ್, ಪಕ್ಕದ ದರ್ಗಾ ಕಡೆಗೆ ಓಡಿ ಹೋಗಿದ್ದಾರೆ. ಅಟ್ಟಿಸಿಕೊಂಡು ಬಂದ ರೌಡಿಗಳ ಕೈಗೆ ಸಿಗದೆ ಗೌಸಿಯಾ ನಗರದ ಮನೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.</p>.<p><strong>ಮಾರಕಾಸ್ತ್ರ ಪ್ರದರ್ಶನ: </strong>ನಂತರ ರೌಡಿಗಳು ಅಜ್ಮತ್ ಸ್ಕೂಟರ್ನಲ್ಲೇ ಮಾರಕಾಸ್ತ್ರಗಳನ್ನು ರಸ್ತೆಯಲ್ಲಿ ಪ್ರದರ್ಶಿಸುತ್ತಾ ಅವರ ಮನೆಗೆ ಬಂದಿದ್ದಾರೆ. ಅಜ್ಮತ್ ಅವರನ್ನು ಕೆಟ್ಟದಾಗಿ ನಿಂದಿಸುತ್ತಾ ಮಾರಕಾಸ್ತ್ರಗಳಿಂದ ಮನೆಯೊಳಕ್ಕೆ ನುಗ್ಗಲು ಯತ್ನಿಸಿದ್ದಾರೆ. ಆಗ, ಮನೆಯಲ್ಲಿದ್ದ ಮಹಿಳೆ ಕೂಡಲೇ ಒಳಗಿನಿಂದ ಗೇಟ್ ಹಾಕಿಕೊಂಡಿದ್ದಾರೆ. ಮಹಿಳೆಗೂ ನಿಂದಿಸಿರುವ ರೌಡಿಗಳು ಮನೆ ಮುಂದಿದ್ದ ವಾಹನಗಳ ಗಾಜು ಒಡೆದು ದಾಂದಲೆ ನಡೆಸಿ, ಅಜ್ಮತ್ ಸ್ಕೂಟರ್ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.</p>.<p>ವಿಷಯ ತಿಳಿದ ಕೂಡಲೇ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಕೆಲ ಹೊತ್ತಿನ ನಂತರ ಅಜ್ಮತ್ ಠಾಣೆಗೆ ಬಂದು ತಮ್ಮ ಮೇಲೆ ನಡೆದ ಕೊಲೆ ಯತ್ನದ ಕುರಿತು ದೂರು ಕೊಟ್ಟಿದ್ದಾರೆ. ಆ ಮೇರೆಗೆ ಕವಾಲಿ, ಆಸಿಫ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.</p>.<p>Quote - ನಗರಸಭೆ ಸದಸ್ಯ ಅಜ್ಮತ್ಉಲ್ಲಾ ಖಾನ್ ಅವರ ಮೇಲೆ ಸ್ಥಳೀಯ ಯುವಕರೇ ಕೊಲೆಗೆ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಜಿ.ಪಿ. ರಮೇಶ್ ಸರ್ಕಲ್ ಇನ್ಸ್ಪೆಕ್ಟರ್ ರಾಮನಗರ ವೃತ್ತ</p>.<p>Cut-off box - ಶಿಷ್ಯ ಕವಾಲಿ ಕೃತ್ಯ ರಾಮನಗರ ಟೌನ್ ಠಾಣೆಯ ರೌಡಿ ಶೀಟರ್ ಆಗಿರುವ ಅಜ್ಮತ್ ಕೊಲೆ ಯತ್ನ ನಡೆಸಿರುವುದು ಆತನ ಶಿಷ್ಯ ಹಾಗೂ ಟೌನ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಕವಾಲಿ!. ಇಬ್ಬರ ನಡುವೆ ಯಾವುದೇ ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು. ಅದೇ ದ್ವೇಷಕ್ಕೆ ತನ್ನ ಸಹಚರರಾದ ಆಸಿಫ್ ಹಾಗೂ ಮತ್ತೊಬ್ಬನ ಜೊತೆಗೂಡಿ ಕೊಲೆ ಯತ್ನ ನಡೆಸಿದ್ದಾನೆ. ಕವಾಲಿ ಮತ್ತು ಆತನ ಸಹಚರರ ವಿರುದ್ಧ ರಾಮನಗರವಷ್ಟೇ ಅಲ್ಲದೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಿಂದೆಯೂ ಕೊಲೆ ಯತ್ನ ನಡೆದಿತ್ತು ಅಜ್ಮತ್ ಸಹ 10 ವರ್ಷಗಳ ಹಿಂದೆ ಕೊಲೆಯಾಗಿದ್ದ ರೌಡಿ ಶೀಟರ್ ಹಾಗೂ ಮಾಜಿ ನಗರಸಭೆ ಸದಸ್ಯ ಮಹಮ್ಮದ್ ನಿಜಾಂ ಪಾಷ ಶಿಷ್ಯ. ಅಜ್ಮತ್ ವಿರುದ್ಧ ಟೌನ್ ಠಾಣೆಯಲ್ಲಿ ವಿವಿಧ ಪ್ರಕರಣಗಳಿವೆ. ನಿಜಾಂ ಕೊಲೆ ಬಳಿಕ ಅಜ್ಮತ್ ಮೇಲೂ ನಾಲ್ಕೈದು ಸಲ ಕೊಲೆ ಯತ್ನಗಳು ನಡೆದಿವೆ. ತನ್ನ ಗುರು ಸಾವಿನ ಬಳಿಕ ಅಜ್ಮತ್ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು. ನಗರಸಭೆ ಚುನಾವಣೆಯಲ್ಲಿ ವಾರ್ಡ್–22ರಿಂದ ಟಿಕೆಟ್ ಪಡೆದು ಸ್ಪರ್ಧಿಸಿ ಗೆದ್ದಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>