<p><strong>ರಾಮನಗರ:</strong> ನಗರದ ವಿಶೇಷ ಮಕ್ಕಳಿಗೆ ನಗರಸಭೆ ವತಿಯಿಂದ ಬುಧವಾರ ಅಂಚೆ ಇಲಾಖೆಯ ₹40 ಸಾವಿರ ಮೊತ್ತದ ಬಾಂಡ್ಗಳನ್ನು ವಿತರಿಸಲಾಯಿತು. ನಗರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ವಿತರಣೆ ಮಾಡಿದರು.</p>.<p>ಬಳಿಕ ಮಾತನಾಡಿದ ಅವರು, ‘2025-26ನೇ ಬಜೆಟ್ನಲ್ಲಿ ಅಂಗವಿಕಲ ಮಕ್ಕಳ ಅಭ್ಯುಧಯಕ್ಕಾಗಿ ₹6.50 ಲಕ್ಷ ಅನುದಾನ ಮೀಸಲಿಟ್ಟಿದ್ದೇವು. ಅದಕ್ಕೆ 16 ಮಕ್ಕಳ ಪೋಷಕರು ಅರ್ಜಿ ಸಲ್ಲಿಸಿದ್ದರು. ಅವರಿಗೆ ತಲಾ ₹40,600 ಮೊತ್ತದ ಅಂಚೆ ಇಲಾಖೆಯ ಬಾಂಡ್ಗಳನ್ನು ನೀಡುತ್ತಿದೇವೆ. 10 ವರ್ಷಗಳ ಅವಧಿಯ ಬಾಂಡ್ ಮೆಚ್ಯುರಿಯಾದಾಗ ಫಲಾನುಭವಿಗಳಿಗೆ ₹81,200 ಸಿಗಲಿದೆ’ ಎಂದರು.</p>.<p>‘ವಿಶೇಷ ಮಕ್ಕಳು ದೇವರಿಗೆ ಸಮ. ಅವ ಆರೋಗ್ಯ, ಶಿಕ್ಷಣ, ಪೋಷಣೆಗೆ ನೆರವಾಗುವುದು ಪುಣ್ಯದ ಕೆಲಸ. ಒಂದು ವಿಶೇಷ ಮಗುವನ್ನು ಸಾಕುವುದು ಅಷ್ಟು ಸುಲಭವಲ್ಲ. ಈ ವಿಷಯದಲ್ಲಿ ಅವರನ್ನು ಹೆತ್ತ ತಂದೆ–ತಾಯಿಯ ಶ್ರಮ ಶ್ಲಾಘನೀಯ. ಅವರ ಸೇವೆಗೆ ಬೆಲೆ ಕಟ್ಟಲಾಗದು. ಅಂತರಿಗೆ ನೆರವಾಗಲೆಂದು ನಗರಸಭೆ ಬಾಂಡ್ಗಳನ್ನು ವಿತರಿಸುತ್ತಿದೆ’ ಎಂದು ತಿಳಿಸಿದರು.</p>.<p>ಪೌರಾಯುಕ್ತ ಡಾ. ಜಯಣ್ಣ, ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯ ಮುತ್ತುರಾಜು ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ನಗರದ ವಿಶೇಷ ಮಕ್ಕಳಿಗೆ ನಗರಸಭೆ ವತಿಯಿಂದ ಬುಧವಾರ ಅಂಚೆ ಇಲಾಖೆಯ ₹40 ಸಾವಿರ ಮೊತ್ತದ ಬಾಂಡ್ಗಳನ್ನು ವಿತರಿಸಲಾಯಿತು. ನಗರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ವಿತರಣೆ ಮಾಡಿದರು.</p>.<p>ಬಳಿಕ ಮಾತನಾಡಿದ ಅವರು, ‘2025-26ನೇ ಬಜೆಟ್ನಲ್ಲಿ ಅಂಗವಿಕಲ ಮಕ್ಕಳ ಅಭ್ಯುಧಯಕ್ಕಾಗಿ ₹6.50 ಲಕ್ಷ ಅನುದಾನ ಮೀಸಲಿಟ್ಟಿದ್ದೇವು. ಅದಕ್ಕೆ 16 ಮಕ್ಕಳ ಪೋಷಕರು ಅರ್ಜಿ ಸಲ್ಲಿಸಿದ್ದರು. ಅವರಿಗೆ ತಲಾ ₹40,600 ಮೊತ್ತದ ಅಂಚೆ ಇಲಾಖೆಯ ಬಾಂಡ್ಗಳನ್ನು ನೀಡುತ್ತಿದೇವೆ. 10 ವರ್ಷಗಳ ಅವಧಿಯ ಬಾಂಡ್ ಮೆಚ್ಯುರಿಯಾದಾಗ ಫಲಾನುಭವಿಗಳಿಗೆ ₹81,200 ಸಿಗಲಿದೆ’ ಎಂದರು.</p>.<p>‘ವಿಶೇಷ ಮಕ್ಕಳು ದೇವರಿಗೆ ಸಮ. ಅವ ಆರೋಗ್ಯ, ಶಿಕ್ಷಣ, ಪೋಷಣೆಗೆ ನೆರವಾಗುವುದು ಪುಣ್ಯದ ಕೆಲಸ. ಒಂದು ವಿಶೇಷ ಮಗುವನ್ನು ಸಾಕುವುದು ಅಷ್ಟು ಸುಲಭವಲ್ಲ. ಈ ವಿಷಯದಲ್ಲಿ ಅವರನ್ನು ಹೆತ್ತ ತಂದೆ–ತಾಯಿಯ ಶ್ರಮ ಶ್ಲಾಘನೀಯ. ಅವರ ಸೇವೆಗೆ ಬೆಲೆ ಕಟ್ಟಲಾಗದು. ಅಂತರಿಗೆ ನೆರವಾಗಲೆಂದು ನಗರಸಭೆ ಬಾಂಡ್ಗಳನ್ನು ವಿತರಿಸುತ್ತಿದೆ’ ಎಂದು ತಿಳಿಸಿದರು.</p>.<p>ಪೌರಾಯುಕ್ತ ಡಾ. ಜಯಣ್ಣ, ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯ ಮುತ್ತುರಾಜು ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>