ಕನಕಪುರ: ದೊಡ್ಡಬೆಟ್ಟಳ್ಳಿಯಲ್ಲಿ ರಾಮಸಂಜೀವಮೂರ್ತಿ ಬ್ರಹ್ಮರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಚಿಕ್ಕಬೆಟ್ಟಹಳ್ಳಿ ಮತ್ತು ದೊಡ್ಡಬೆಟ್ಟಳ್ಳಿ ಎರಡೂ ಗ್ರಾಮಸ್ಥರು ಸೇರಿ ಬ್ರಹ್ಮರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಆಚರಿಸಿದರು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು –ಜವನ ತೇರಿಗೆ ಎಸೆದು ಹರಕೆ ತೀರಿಸಿದರು.
ಮೇ19 ರಂದು ಲೋಕ ಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ನಡೆಯಿತು. ಮೇ20ರಂದು ಬ್ರಹ್ಮರಥೋತ್ಸವ ಜರುಗಿತು. 21ರಂದು ಸಂಜೆ ಕಬ್ಬಾಳಮ್ಮನ ಎಳವಾರ ಕಾರ್ಯಕ್ರಮ ನಡೆಯಿತು. ಮೇ22ರ ಬೆಳಿಗ್ಗೆ ಕಬ್ಬಾಳಮ್ಮನ ಅಗ್ನಿಕೊಂಡೋತ್ಸವ ನಡೆಯಲಿದೆ. ನಂತರ ಸಿಡಿ ಕಾರ್ಯ ಜರುಗಲಿದೆ.