ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರೇಟರ್‌ಗೆ ಸಿಲುಕಿ ಯುವಕನ ಕೈ ತುಂಡು

ಗಣಪತಿ ವಿಸರ್ಜನೆ ವೇಳೆ ಅವಘಡ
Last Updated 8 ಸೆಪ್ಟೆಂಬರ್ 2019, 5:10 IST
ಅಕ್ಷರ ಗಾತ್ರ

ರಾಮನಗರ: ಗಣಪತಿ ಮೂರ್ತಿ‌ ವಿಸರ್ಜನೆ ವೇಳೆ ಜನರೇಟರ್‌ಗೆ ಸಿಲುಕಿ ಯುವಕನೋರ್ವನ ಕೈ ತುಂಡಾಗಿರುವ ಘಟನೆ ಶನಿವಾರ ರಾತ್ರಿ ನಗರದಲ್ಲಿ ನಡೆದಿದೆ.

ನರೇಂದ್ರ (24) ಕೈ ಕಳೆದುಕೊಂಡ ಯುವಕ. ಈಗ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ನಗರದ ಚಾಮುಂಡೇಶ್ವರಿ ಬಡಾವಣೆ ಅಮೃತ್ ಕೇಬಲ್ ಬಳಿ ಪ್ರತಿಷ್ಟಾಪಿಸಲಾಗಿದ್ದ ಮೂರ್ತಿಯನ್ನು ಶನಿವಾರ ರಾತ್ರಿ‌ ವಿಸರ್ಜಿಸಲಾಗುತ್ತಿತ್ತು.

ರಂಗರಾಯರದೊಡ್ಡಿ ಕೆರೆ ಬಳಿ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT