ಇತ್ತೀಚೆಗೆ ನನ್ನ ಮನವನ್ನು ಕಾಡಿದ, ಅರೆಕ್ಷಣ ಕನವರಿಸುವಂತೆ ಮಾಡಿದ ಕೃತಿ ಎಸ್.ಎಲ್. ಭೈರಪ್ಪ ಅವರ ‘ವಂಶವೃಕ್ಷ’. ಭಾವಗಳ ನಡುವೆ ಬಯಕೆಗಳು ಬೆರೆಯುವಂತೆ, ಬೆಯ್ಯುವಂತೆ ಅವರು ವ್ಯಕ್ತಗೊಳಿಸಿದ್ದಾರೆ. ಈ ಕೃತಿಯಲ್ಲಿನ ಅಷ್ಟು ಪಾತ್ರಧಾರಿಗಳು ನನ್ನ ಮನದೊಳಗೆ ಮನೆ ಮಾಡಿದ್ದಾರೆ. ಮಹತ್ತರವಾದ ಆದರ್ಶವಾದಿ ಶ್ರೀನಿವಾಸ ದ್ತೋತ್ರಿ ಅವರ ಘನತೆ, ಗಾಢತೆಯು ನನ್ನೊಳಗಿನ ತುಮುಲಗಳನ್ನು ತೊಡೆದು ಹಾಕುವಂತಹ ಶಕ್ತಿಯಾಗಿದ್ದಾರೆ. ಅಂತೆಯೇ ಸದಾಶಿವ ರಾವ್ ಅವರ ಬದ್ಧತೆ, ರಾಜಾರಾವ್ ಅವರ ಚಾಕಚಕ್ಯತೆ, ನಂಜುಂಡ ದ್ತೋತ್ರಿಯ ಪ್ರೌಢತೆ, ಪೃಥ್ವಿ ಹಾಗೂ ನಾಗುವಿನ ವ್ಯಾಕುಲತೆ, ಕಾತ್ಯಾಯಿನಿಯ ಚಂಚಲತೆಯು ಒಂದಲ್ಲ ಒಂದು ರೀತಿಯಲ್ಲಿ ಮಾರ್ಗದರ್ಶನ ನೀಡುವಂತಿದೆ. ಕೃತಿಯಲ್ಲಿನ ಬರವಣಿಗೆ ಮತ್ತು ಭಾಷೆ ಬಳಕೆಯ ಶಕ್ತಿ ಅಪರಿಮಿತವಾದದ್ದು.
-ಎಂ. ಉದಯ್, ಮಂಕುಂದ ಚನ್ನಪಟ್ಟಣ