ಸಿಂಧ್ಯನಗರದ ನಿವಾಸಿ ಶಂಕರ್ ಮಾತನಾಡಿ, ಸಿಂಧ್ಯನಗರ ಕಡುಬಡವರು ವಾಸಿಸುವ ಪ್ರದೇಶವಾಗಿದೆ. ಆಶ್ರಯ ಯೋಜನೆಯಲ್ಲಿ ನಿವೇಶನ ಪಡೆದ ಎಲ್ಲಾ ಜಾತಿಯ ಬಡವರು ಇಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಯಾವುದೇ ಪಕ್ಷ, ಪಂಚಾಯಿತಿಯಿಂದ ಸಹಾಯ ಮಾಡಿಲ್ಲ. ನಮ್ಮ ಕಷ್ಟ ಕೇಳಿಲ್ಲ ಎಂದು ಆರೋಪಿಸಿದರು.