ಮಳೆಯಿಂದಾಗಿ ಕೊಚ್ಚಿಹೋಗಿದ್ದ ತಾಲ್ಲೂಕಿನ ಅಂಬಾಡಹಳ್ಳಿ - ಎಲೆತೋಟದಹಳ್ಳಿ ಸಂಪರ್ಕ ರಸ್ತೆಯನ್ನು ಅಂಬಾಡಹಳ್ಳಿ ಹಾಗೂ ಎಲೇತೋಟದಹಳ್ಳಿ ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ಮರು ನಿರ್ಮಾಣ ಮಾಡುತ್ತಿದ್ದಾರೆ. ಹಳೇ ಪೈಪುಗಳು, ಜಲ್ಲಿಕಲ್ಲು, ಮರಳು ಬಳಸಿ ರಸ್ತೆಯನ್ನು ಮರುನಿರ್ಮಾಣ ಮಾಡುವ ಕಾರ್ಯದಲ್ಲಿ ಗ್ರಾಮಸ್ಥರು ಸ್ವತಃ ತಾವೇ ದುಡಿಯಲಾರಂಭಿಸಿದ್ದಾರೆ.