ಆರೋಪಿಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಓಡಾಡುವವರಿಗೆ ಬೆದರಿಕೆ ಹಾಕಿ ಚಾಕು ತೋರಿಸಿ, ಚಿನ್ನದ ಒಡವೆ ಮತ್ತು ನಗದು ಸುಲಿಗೆ ಮಾಡುತ್ತಿದ್ದರು. ರಾಮನಗರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ 5 ದರೋಡೆ ಪ್ರಕರಣಗಳಲ್ಲಿ ಪಾಲ್ಗೊಂಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಅವರಿಂದ ₨15 ಲಕ್ಷ ಬೆಲೆ ಬಾಳುವ 302 ಗ್ರಾಂ ಚಿನ್ನದ ಒಡವೆ, ಮೊಬೈಲ್, ಸುಲಿಗೆ ಮಾಡಲು ಬಳಸುತ್ತಿದ್ದ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.