ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ದರೋಡೆ ಆರೋಪಿಗಳ ಬಂಧನ

Last Updated 24 ಜೂನ್ 2020, 16:58 IST
ಅಕ್ಷರ ಗಾತ್ರ

ರಾಮನಗರ: ಹೆದ್ದಾರಿಯಲ್ಲಿ ಓಡಾಡುವ ಒಂಟಿ ಮಹಿಳೆಯರು, ಪ್ರೇಮಿಗಳನ್ನು ಹೆದರಿಸಿ ದರೋಡೆ ಮಾಡುತ್ತಿದ್ದ ತಂಡವನ್ನು ರಾಮನಗರ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಹೋಬಳಿಯ ಮರಳೆಬೇಕುಪ್ಪೆ ಗ್ರಾಮದ ಪ್ರವೀಣ್‍ಕುಮಾರ್ (32) ಮುಳ್ಳಳ್ಳಿ ಗ್ರಾಮದ ಶಿವಕುಮಾರ್ (28) ಬಂಧಿತರು.

ಆರೋಪಿಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಓಡಾಡುವವರಿಗೆ ಬೆದರಿಕೆ ಹಾಕಿ ಚಾಕು ತೋರಿಸಿ, ಚಿನ್ನದ ಒಡವೆ ಮತ್ತು ನಗದು ಸುಲಿಗೆ ಮಾಡುತ್ತಿದ್ದರು. ರಾಮನಗರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ 5 ದರೋಡೆ ಪ್ರಕರಣಗಳಲ್ಲಿ ಪಾಲ್ಗೊಂಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಅವರಿಂದ ₨15 ಲಕ್ಷ ಬೆಲೆ ಬಾಳುವ 302 ಗ್ರಾಂ ಚಿನ್ನದ ಒಡವೆ, ಮೊಬೈಲ್, ಸುಲಿಗೆ ಮಾಡಲು ಬಳಸುತ್ತಿದ್ದ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT