‘ನೀಲಮ್ಮ ಕೆ.ಎ.ಸತ್ಯನಾರಾಯಣ ಶೆಟ್ಟರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಟ್ಟಡ ಕಟ್ಟಿಸಿ, ಉಚಿತವಾಗಿ ನೀಡಿದರು. ಹಳ್ಳಿಗಾಡಿನ ಮಕ್ಕಳು ವಿದ್ಯಾವಂತರಾಗಬೇಕು ಎಂದು ಪ್ರತಿವರ್ಷವೂ ಪ್ರತಿಭಾ ಪುರಸ್ಕಾರ ನೀಡಿ ರೈತರ ಮಕ್ಕಳ ಪ್ರಗತಿಗೆ ಬೆಂಬಲ ನೀಡುತ್ತಿದ್ದಾರೆ. ಸಮಾಜದ ಋಣ ತೀರಿಸಲು ನಾವೆಲ್ಲರೂ ಬಡವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ, ಸಂವಿಧಾನದ ಆಶಯದಂತೆ ಬಾಳು, ಬಾಳಗೊಡು ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಂಡು ಸರ್ವರೂ ಸಹೋದರರಂತೆ ನೆಮ್ಮದಿಯಿಂದ ಬದುಕಬೇಕು’ ಎಂದರು.