‘ಪರಿಸರಪರ ಕಾಳಜಿಯನ್ನು ಜನರಲ್ಲಿ ಮೂಡಿಸಲು ಐದು ಸಾವಿರ ಗಿಡಗಳನ್ನು ನೆಡುವ ಸಂಕಲ್ಪ ಮಾಡಿದ್ದೇವೆ. 1 ಸಾವಿರ ಗಿಡಗಳನ್ನು ವಿತರಿಸಲಾಗುತ್ತಿದೆ. ನಾವು ವಿತರಿಸುವ ಎಲ್ಲಾ ಗಿಡಗಳು ವಿವಿಧ ಹಣ್ಣುಗಳದ್ದಾಗಿದೆ. ಇಂಥ ಗಿಡಗಳಿಂದ ದೊರೆಯುವ ಹಣ್ಣುಗಳು ಮನುಷ್ಯರಿಗೆ ಸೇರಿದಂತೆ ಪ್ರಾಣಿ-ಪಕ್ಷಿಗಳಿಗೂ ಆಹಾರ ಒದಗಿಸುತ್ತದೆ. ಅಲ್ಲದೆ ಶುದ್ಧ ಪರಿಸರ ನಿಮಾರ್ಣಕ್ಕೆ ಕಾರಣವಾಗುತ್ತದೆ’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಮುಖಂಡ ಪುಟ್ಟ ಮಾದಯ್ಯ ತಿಳಿಸಿದರು.