<p><strong>ಮಾಗಡಿ:</strong> ತಾಲ್ಲೂಕಿನ ಪ್ರಸಿದ್ಧ ಸಾವನದುರ್ಗ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿ ರಥೋತ್ಸವ ಅದ್ದೂರಿಯಾಗಿ ನಡೆಯಿತು. ರಥೋತ್ಸವ ಅಂಗವಾಗಿ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ನವಗ್ರಹ ಪೂಜೆ, ಕೆಳಸ ಸ್ಥಾಪನೆ, ಗಂಗೆ ಪೂಜೆ ಹಾಗೂ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಪ್ರಭಾರ ತಹಸೀಲ್ದಾರ್ ಡಾ.ಪ್ರತಿಭಾ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ವೀರಗಾಸೆ, ಪೂಜಾ ಕುಣಿತ ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ರಥೋತ್ಸವ ಮೆರವಣಿಗೆಗೆ ಮೆರುಗು ನೀಡಿದವು. ನೂರಾರು ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು.</p>.<p>ಮಧ್ಯಾಹ್ನ 1ಕ್ಕೆ ಪ್ರಸಾದ ವಿನಿಯೋಗ, ಸಂಜೆ 4ಕ್ಕೆ ಮಡಿ ತೇರು, 5ಕ್ಕೆ ನಂದಿ ವಾಹನೋತ್ಸವ, 5.30ಕ್ಕೆ ಆನೆ ವಾಹನೋತ್ಸವ, 6ಕ್ಕೆ ಬೆಳ್ಳಿ ಪ್ರಭಾವಳಿ ಉತ್ಸವ, 6.30ಕ್ಕೆ ಖಡ್ಗೋತ್ಸವ, 7ಕ್ಕೆ ಶರಭೋತ್ಸವ ಹಾಗೂ ಬೆಂಗಳೂರಿನ ಸಂಜೀವಿನಿ ಕಲಾ ಟ್ರಸ್ಟ್ ವತಿಯಿಂದ ಭರತನಾಟ್ಯ ರಾತ್ರಿ 9ಕ್ಕೆ ಮುತ್ತಿನ ಪಲ್ಲಕ್ಕೆ ಉತ್ಸವ ಹಾಗೂ ದಾಸೋಹ ನಡೆಯಿತು.</p>.<p>ಪ್ರಭಾರ ತಹಶೀಲ್ದಾರ್ ಡಾ.ಪ್ರತಿಭಾ ಮಾತನಾಡಿ, ಪ್ರಕೃತಿ ಮಡಿಲಲ್ಲಿ ಇರುವ ಸಾವನದುರ್ಗ ವೀರಭದ್ರಸ್ವಾಮಿ ಎಲ್ಲರಿಗೂ ಒಳಿತು ಮಾಡಲಿ ಎಂದು ಹರಿಸಿದರು.</p>.<p>ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತು. ಆರ್ಚಕ ಲೋಕೇಶರಾಧ್ಯ ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<p><br>ಮಾಗಡಿ : ತಾಲ್ಲೂಕಿನ ಸುಪ್ರಸಿದ್ಧ ಸಾವನದುರ್ಗ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.<br>ರಥೋತ್ಸವದ ಅಂಗವಾಗಿ ವೀರಭದ್ರ ಸ್ವಾಮಿಗೆ ಪಂಚಾಮೃತ ಅಭಿಷೇಕ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು ನವಗ್ರಹ ಪೂಜೆ, ಕೆಳಕ ಸ್ಥಾಪನೆ ಗಂಗೆ ಪೂಜೆ, ಅನೇಕ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.</p>.<p>ಪ್ರಭಾರಿ ತಹಸೀಲ್ದಾರ್ ಡಾ. ಪ್ರತಿಭಾ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.<br> ವೀರಾಗಾಸೆ ಕುಳಿತ ಪೂಜಾ ಕುಣಿತ ಸೇರಿ ಸಾಂಸ್ಕೃತಿಕ ಕಲಾತಂಡಗಳು ರಥೋತ್ಸವಕ್ಕೆ ಮೆರವಣಿಗೆಗೆ ಮೆರುಗು ನೀಡಿತ್ತು ಬ್ರಹ್ಮರಥೋತ್ಸವ ಹೇಳುತ್ತಿದ್ದಂತೆ ನೂರಾರು ಭಕ್ತರು ಪ್ರತಕ್ಕೆ ಬಾಳೆಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು.</p>.<p>ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ, ವಿನಿಯೋಗ, 4 ಗಂಟೆಗೆ ಮಡಿ ತೇರು, <br> 5 ಗಂಟೆಗೆ ನಂದಿ ವಾಹನೋತ್ಸವ, 5.30 ಕ್ಕೆ ಆನೆ ವಾಹನೋತ್ಸವ, 6 ಕ್ಕೆ ಬೆಳ್ಳಿ ಪ್ರಭಾವಳಿ ಉತ್ಸವ, 6.30ಕ್ಕೆ ಖಡ್ಗೋತ್ಸವ, 7 ಕ್ಕೆ ಶರಭೋತ್ಸವ ಹಾಗೂ ಬೆಂಗಳೂರಿನ ಸಂಜೀವಿನಿ ಕಲಾ ಟ್ರಸ್ಟ್ ವತಿಯಿಂದ ಭರತನಾಟ್ಯ ರಾತ್ರಿ 9 ಕ್ಕೆ ಮುತ್ತಿನ ಪಲ್ಲಕ್ಕೆ ಉತ್ಸವ ಹಾಗೂ ದಾಸೋಹ ನಡೆಯಲಿದ್ದು,</p>.<p>ಪ್ರಭಾರಿ ತಹಶೀಲ್ದಾರ್ ಡಾ. ಪ್ರತಿಭಾ ಮಾತನಾಡಿ, ಕೆಂಪೇಗೌಡರ ನಾಡಿನಲ್ಲಿ ದೇವರ ಆರಾಧನೆ ಮತ್ತು ಭಕ್ತಿ ಸಮರ್ಪಣೆ ಹೆಚ್ಚಾಗಿ ನಡೆಯುತ್ತಿದ್ದು ದೂರದೃಷ್ಟಿ ಹಿನ್ನೆಲೆಯ ಕೆಂಪೇಗೌಡರು ಸಾವನದುರ್ಗದಲ್ಲಿ ದೇವಾಲಯ ನಿರ್ಮಾಣ ಮಾಡಿ ಭಕ್ತರಿಗೆ ಒಳಿತಾಗುವಂತೆ ದೇವತೆಗಳ ಆರಾಧನೆ ಮಾಡಿದ್ದು ಅದನ್ನು ಮುಂದುವರಿಸುವ ಕೆಲಸವನ್ನು ಹಿಂದಿನ ಪೀಳಿಗೆ ಮಾಡುತ್ತಿದ್ದು ಪ್ರಕೃತಿ ಮಡಿಲಲ್ಲಿ ಇರುವ ಸಾವಂದಿ ವೀರಭದ್ರ ಸ್ವಾಮಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ತಿಳಿಸಿದರು.</p>.<p>ಬಂದಿದ್ದ ಭಕ್ತರಿಗೆ ಪಾನಕ ಮಜ್ಜಿಗೆ ಕೋಸಂಬರಿ ವಿತರಣೆ ಮಾಡಲಾಯಿತು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಾವಂದುರ್ಗಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಭಕ್ತರು ಪರದಾಡುವಂತೆ ಆಗಿತ್ತು.<br> ಆರ್ಚಕ ಲೋಕೇಶರಾಧ್ಯ ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ತಾಲ್ಲೂಕಿನ ಪ್ರಸಿದ್ಧ ಸಾವನದುರ್ಗ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿ ರಥೋತ್ಸವ ಅದ್ದೂರಿಯಾಗಿ ನಡೆಯಿತು. ರಥೋತ್ಸವ ಅಂಗವಾಗಿ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ನವಗ್ರಹ ಪೂಜೆ, ಕೆಳಸ ಸ್ಥಾಪನೆ, ಗಂಗೆ ಪೂಜೆ ಹಾಗೂ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಪ್ರಭಾರ ತಹಸೀಲ್ದಾರ್ ಡಾ.ಪ್ರತಿಭಾ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ವೀರಗಾಸೆ, ಪೂಜಾ ಕುಣಿತ ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ರಥೋತ್ಸವ ಮೆರವಣಿಗೆಗೆ ಮೆರುಗು ನೀಡಿದವು. ನೂರಾರು ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು.</p>.<p>ಮಧ್ಯಾಹ್ನ 1ಕ್ಕೆ ಪ್ರಸಾದ ವಿನಿಯೋಗ, ಸಂಜೆ 4ಕ್ಕೆ ಮಡಿ ತೇರು, 5ಕ್ಕೆ ನಂದಿ ವಾಹನೋತ್ಸವ, 5.30ಕ್ಕೆ ಆನೆ ವಾಹನೋತ್ಸವ, 6ಕ್ಕೆ ಬೆಳ್ಳಿ ಪ್ರಭಾವಳಿ ಉತ್ಸವ, 6.30ಕ್ಕೆ ಖಡ್ಗೋತ್ಸವ, 7ಕ್ಕೆ ಶರಭೋತ್ಸವ ಹಾಗೂ ಬೆಂಗಳೂರಿನ ಸಂಜೀವಿನಿ ಕಲಾ ಟ್ರಸ್ಟ್ ವತಿಯಿಂದ ಭರತನಾಟ್ಯ ರಾತ್ರಿ 9ಕ್ಕೆ ಮುತ್ತಿನ ಪಲ್ಲಕ್ಕೆ ಉತ್ಸವ ಹಾಗೂ ದಾಸೋಹ ನಡೆಯಿತು.</p>.<p>ಪ್ರಭಾರ ತಹಶೀಲ್ದಾರ್ ಡಾ.ಪ್ರತಿಭಾ ಮಾತನಾಡಿ, ಪ್ರಕೃತಿ ಮಡಿಲಲ್ಲಿ ಇರುವ ಸಾವನದುರ್ಗ ವೀರಭದ್ರಸ್ವಾಮಿ ಎಲ್ಲರಿಗೂ ಒಳಿತು ಮಾಡಲಿ ಎಂದು ಹರಿಸಿದರು.</p>.<p>ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತು. ಆರ್ಚಕ ಲೋಕೇಶರಾಧ್ಯ ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<p><br>ಮಾಗಡಿ : ತಾಲ್ಲೂಕಿನ ಸುಪ್ರಸಿದ್ಧ ಸಾವನದುರ್ಗ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.<br>ರಥೋತ್ಸವದ ಅಂಗವಾಗಿ ವೀರಭದ್ರ ಸ್ವಾಮಿಗೆ ಪಂಚಾಮೃತ ಅಭಿಷೇಕ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು ನವಗ್ರಹ ಪೂಜೆ, ಕೆಳಕ ಸ್ಥಾಪನೆ ಗಂಗೆ ಪೂಜೆ, ಅನೇಕ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.</p>.<p>ಪ್ರಭಾರಿ ತಹಸೀಲ್ದಾರ್ ಡಾ. ಪ್ರತಿಭಾ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.<br> ವೀರಾಗಾಸೆ ಕುಳಿತ ಪೂಜಾ ಕುಣಿತ ಸೇರಿ ಸಾಂಸ್ಕೃತಿಕ ಕಲಾತಂಡಗಳು ರಥೋತ್ಸವಕ್ಕೆ ಮೆರವಣಿಗೆಗೆ ಮೆರುಗು ನೀಡಿತ್ತು ಬ್ರಹ್ಮರಥೋತ್ಸವ ಹೇಳುತ್ತಿದ್ದಂತೆ ನೂರಾರು ಭಕ್ತರು ಪ್ರತಕ್ಕೆ ಬಾಳೆಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು.</p>.<p>ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ, ವಿನಿಯೋಗ, 4 ಗಂಟೆಗೆ ಮಡಿ ತೇರು, <br> 5 ಗಂಟೆಗೆ ನಂದಿ ವಾಹನೋತ್ಸವ, 5.30 ಕ್ಕೆ ಆನೆ ವಾಹನೋತ್ಸವ, 6 ಕ್ಕೆ ಬೆಳ್ಳಿ ಪ್ರಭಾವಳಿ ಉತ್ಸವ, 6.30ಕ್ಕೆ ಖಡ್ಗೋತ್ಸವ, 7 ಕ್ಕೆ ಶರಭೋತ್ಸವ ಹಾಗೂ ಬೆಂಗಳೂರಿನ ಸಂಜೀವಿನಿ ಕಲಾ ಟ್ರಸ್ಟ್ ವತಿಯಿಂದ ಭರತನಾಟ್ಯ ರಾತ್ರಿ 9 ಕ್ಕೆ ಮುತ್ತಿನ ಪಲ್ಲಕ್ಕೆ ಉತ್ಸವ ಹಾಗೂ ದಾಸೋಹ ನಡೆಯಲಿದ್ದು,</p>.<p>ಪ್ರಭಾರಿ ತಹಶೀಲ್ದಾರ್ ಡಾ. ಪ್ರತಿಭಾ ಮಾತನಾಡಿ, ಕೆಂಪೇಗೌಡರ ನಾಡಿನಲ್ಲಿ ದೇವರ ಆರಾಧನೆ ಮತ್ತು ಭಕ್ತಿ ಸಮರ್ಪಣೆ ಹೆಚ್ಚಾಗಿ ನಡೆಯುತ್ತಿದ್ದು ದೂರದೃಷ್ಟಿ ಹಿನ್ನೆಲೆಯ ಕೆಂಪೇಗೌಡರು ಸಾವನದುರ್ಗದಲ್ಲಿ ದೇವಾಲಯ ನಿರ್ಮಾಣ ಮಾಡಿ ಭಕ್ತರಿಗೆ ಒಳಿತಾಗುವಂತೆ ದೇವತೆಗಳ ಆರಾಧನೆ ಮಾಡಿದ್ದು ಅದನ್ನು ಮುಂದುವರಿಸುವ ಕೆಲಸವನ್ನು ಹಿಂದಿನ ಪೀಳಿಗೆ ಮಾಡುತ್ತಿದ್ದು ಪ್ರಕೃತಿ ಮಡಿಲಲ್ಲಿ ಇರುವ ಸಾವಂದಿ ವೀರಭದ್ರ ಸ್ವಾಮಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ತಿಳಿಸಿದರು.</p>.<p>ಬಂದಿದ್ದ ಭಕ್ತರಿಗೆ ಪಾನಕ ಮಜ್ಜಿಗೆ ಕೋಸಂಬರಿ ವಿತರಣೆ ಮಾಡಲಾಯಿತು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಾವಂದುರ್ಗಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಭಕ್ತರು ಪರದಾಡುವಂತೆ ಆಗಿತ್ತು.<br> ಆರ್ಚಕ ಲೋಕೇಶರಾಧ್ಯ ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>