ಕೈಲಾಂಚ ಗ್ರಾ.ಪಂ. ವ್ಯಾಪ್ತಿಯ ನಾಗೋಹಳ್ಳಿ ಗ್ರಾಮದ ಚಿಕ್ಕಬೈರೇಗೌಡ ಎಂಬುವರ ಜಮೀನಿನಲ್ಲಿ ರಾಶಿ ಹಾಕಿದ್ದ ರಾಗಿತೆನೆಯನ್ನು ತಿಂದಿದೆ. ಕಾವೇರಿ ವನ್ಯಜೀವಿಧಾಮದಿಂದ ಬಂದಿರುವ ಆನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಒಂಟಿ ಆನೆ ಕಳೆದ ವಾರದಿಂದ ತೆಂಗಿನಕಲ್ಲು ಅರಣ್ಯ ಬಿಟ್ಟು ಅರ್ಕಾವತಿ ನದಿ ದಾಟಿ ಈ ಭಾಗದಲ್ಲಿ ಓಡಾಡುತ್ತಿದೆ. ಕೂನಗಲ್, ನಾಗೋಹಳ್ಳಿ, ಹಂದಿಗೊಂದಿ, ಕೈಲಾಂಚ, ಹುಣಸನಹಳ್ಳಿ ಸುತ್ತಮುತ್ತಲ ಗ್ರಾಮಗಳ ಹೊಲದಲ್ಲಿನ ಫಸಲು ಹಾಳು ಮಾಡುತ್ತಿದೆ.