ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆ ಶಿವಕುಮಾರ್ ಇ.ಡಿ ಬಂಧನ ವಿಸ್ತರಣೆ; ನಗರದಲ್ಲಿ ಬಿಗಿ ಭದ್ರತೆ

Last Updated 13 ಸೆಪ್ಟೆಂಬರ್ 2019, 14:01 IST
ಅಕ್ಷರ ಗಾತ್ರ

ಕನಕಪುರ: ಶಾಸಕ ಡಿ.ಕೆ.ಶಿವಕುಮಾರ್‌ ಅವರ ಇ.ಡಿ ಬಂಧನದ ವಿಸ್ತರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಇ.ಡಿ ವಶಕ್ಕೆ ಪಡೆದ ದಿನದಂದು ಕನಕಪುರ ನಗರ ಸೇರಿದಂತೆ ತಾಲ್ಲೂಕಿನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಮೂರು ಬಸ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಎರಡು ಬಸ್‌ಗಳಿಗೆ ಕಲ್ಲು ತೂರಿ ಜಖಂ ಗೊಳಿಸಲಾಗಿತ್ತು. ಬೈಕ್‌ಗಳನ್ನು ಸುಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ‍ಪೊಲೀಸರು ಹೈಆರ್ಲಟ್‌ ಘೋಷಿಸಿದ್ದರು.

ಐಪಿಎಸ್‌ ಅಧಿಕಾರಿ ಎಎಸ್‌ಪಿ ರಾಮರಾಜನ್‌, ಐವರು ಡಿಎಸ್‌ಪಿ, 10ಮಂದಿ ಸಿಪಿಐ, 21 ಎಸ್‌ಐ, 49 ಎಎಸ್‌ಐ ಸೇರಿದಂತೆ 600 ಪೊಲೀಸ್‌ ಸಿಬ್ಬಂದಿ, 3 ಕೆಎಸ್‌ಆರ್‌ಪಿ, 6ಡಿಆರ್‌ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT