ಮೃತರನ್ನು ಗಂಗನಂಜಯ್ಯ(65) ಎಂದು ಗುರುತಿಸಲಾಗಿದೆ. ರೈಲ್ವೆ ಹಳಿ ಮೇಲೆ ಹೋದ ಕುರಿಗಳನ್ನು ಉಳಿಸಲು ಹೋಗಿ ಅವರು ರೈಲಿಗೆ ಸಿಲುಕಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಯಿತು. ರೈಲ್ವೆ ಹಳಿ ಬಳಿ ತಡೆಗೋಡೆ ನಿರ್ಮಿಸಿಲ್ಲದ ಕಾರಣ ಜನರು ಬಲಿಯಾಗುತ್ತಿದ್ದಾರೆ. ರಕ್ಷಣಾ ಬೇಲಿ ನಿರ್ಮಿಸುವಂತೆ ರೈತರು ಮನವಿ ಮಾಡಿದ್ದಾರೆ.