ರಾಮನಗರ: ಮೇಕೆದಾಟು ಪಾದಯಾತ್ರೆಯ ನಾಲ್ಕನೇ ದಿನವಾದ ಬುಧವಾರ ಮಧ್ಯಾಹ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯಿಂದ ನಿರ್ಗಮಿಸಿದರು.
ಕನಕಪುರ ತಾಲ್ಲೂಕಿನ ಚಿಕ್ಕೇನಹಳ್ಳಿಯಿಂದ ರಾಮನಗರ ತಾಲ್ಲೂಕಿನ ಕೆ.ಪಿ. ದೊಡ್ಡಿವರೆಗೆ ಅವರು 8 ಕಿ.ಮೀ. ನಡೆದರು. ಬಳಿಕ ಕಾಂಗ್ರೆಸ್ ನಾಯಕರ ಜೊತೆ ಊಟ ಮಾಡಿದರು. ನಂತರ ಹೈಕೋರ್ಟ್ ಸೂಚನೆ ಬಗ್ಗೆ ಮುಖಂಡರ ಜೊತೆ ಚರ್ಚಿಸಿ ಅಲ್ಲಿಂದ ಬೆಂಗಳೂರಿಗೆ ನಿರ್ಗಮಿಸಿದರು.