ಮಾಗಡಿ: ವಿಜಯದಶಮಿ ಅಂಗವಾಗಿ ಮಂಗಳವಾರ ಸಂಜೆ ಸೋಲೂರಿನ ರೇಣುಕಾ ಯಲ್ಲಮ್ಮದೇವಿ ವಿಜಯೋತ್ಸವ ವೈಭವದಿಂದ ನಡೆಯಿತು. ಅಲಂಕೃತ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.
ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ ಈಡಿಗ, ಕಾರ್ಯದರ್ಶಿ ಚಂದ್ರಶೇಖರ್, ರೇಣುಕಾ, ಗಣೇಶ್, ಕುದೂರಿನ ವೆಂಕಟೇಶ್ ಈಡಿಗ, ಸಿದ್ದರಾಜು, ಅಗಲಕೋಟೆ ರಾಮಣ್ಣ, ಚಿದಾನಂದ್ ಹಾಗೂ ಈಡಿಗ ಸಮಾಜದ ಪದಾಧಿಕಾರಿಗಳು ಮತ್ತು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.