ಶಿಕ್ಷಣ, ಆರೋಗ್ಯ, ಸ್ಯಾನಿಟೇಷನ್, ಶುದ್ಧ ಕುಡಿಯುವ ನೀರು, ಸುಂದರ ಪರಿಸರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಸ್ಥಳೀಯವಾಗಿ ದೊರೆಯುವ ಸಂಪನ್ಮೂಲ ಬಳಸಿಕೊಂಡು ಯುವಕರಿಗೆ ಸ್ವಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಚಾರಿತ್ರಿಕ ಸ್ಮಾರಕಗಳ ರಕ್ಷಣೆ, ಜಲಮೂಲ, ಪರಿಸರ ಹಾಗೂ ಬೆಟ್ಟಗುಡ್ಡಗಳ ಸಂರಕ್ಷಣೆ, ಬಡವರಿಗೆ ಸ್ಥಳೀಯವಾಗಿ ಸ್ವಉದ್ಯೋಗ ಕಲ್ಪಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.