ಅಧಿಕಾರಿಗಳಿಂದ ಉತ್ತೇಜನ: ಪೌರ ಕಾರ್ಮಿಕರು ತಮ್ಮ ಕೆಲಸದಿಂದ ವಿಮುಖರಾಗದಂತೆ ಅವರನ್ನು ಉತ್ತೇಜಿಸುವ ಕೆಲಸವನ್ನು ಗ್ರೂಪ್ ‘ಬಿ‘ ಮತ್ತು ‘ಸಿ‘ ಸಿಬ್ಬಂದಿಗೆ ವಹಿಸಲಾಗಿದೆ. ಈ ಅಧಿಕಾರಿ ಮತ್ತು ಸಿಬ್ಬಂದಿಯು ತಮ್ಮ ಕೆಲಸ ಮುಗಿದ ಬಳಿಕ ಪೌರ ಕಾರ್ಮಿಕರು ಇರುವಲ್ಲಿಗೆ ತೆರಳಿ ಅವರಿಗೆ ಹಣ್ಣು, ಜ್ಯೂಸ್ ಇಲ್ಲವೇ ಎಳನೀರು ಕೊಡಿಸಬೇಕು. ಜೊತೆಗೆ ಆಗಾಗ್ಗೆ ಹ್ಯಾಂಡ್ ಸ್ಯಾನಿಟೈಸರ್ ನೀಡಬೇಕು ಎಂದು ಸೂಚಿಸಲಾಗಿದೆ. ಇಂದಿರಾ ಕ್ಯಾಂಟೀನ್ನ ಊಟೋಪಚಾರ ಕೆಲವೊಮ್ಮೆ ಪೌರ ಕಾರ್ಮಿಕರಿಗೆ ರುಚಿಸುವುದಿಲ್ಲ. ಹೀಗಾಗಿ ಇವರಿಗೆಂದೇ ಅದೇ ಕ್ಯಾಂಟೀನ್ನಲ್ಲಿ ದೋಸೆ, ಇಡ್ಲಿ ಮೊದಲಾದ ಉಪಾಹಾರ ಸಿದ್ಧಪಡಿಸಿ ಕೊಡಲಾಗುತ್ತಿದೆ.