ಕನಕಪುರ: ನಗರದ ಕೋಟೆಯಲ್ಲಿನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಚಂಡಿ ಹೋಮ ನಡಸಲಾಯಿತು. ಭಾರತಿ ತೀರ್ಥಸ್ವಾಮಿ ಹಾಗೂ ವಿಧುಶೇಖರ ಭಾರತಿ ಸ್ವಾಮಿಗಳ ನೇತೃತ್ವದಲ್ಲಿ 8ನೇ ವರ್ಷದ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ನಡೆಯಿತು.
ಶ್ರೀಶಾರದಾ ಪರಮೇಶ್ವರಿ, ಶ್ರೀಶಂಕರ ಭಗವತ್ಪಾದಾಚಾರ್ಯ, ಮಹಾಗಣಪತಿ ದೇವರುಗಳ ಪ್ರತಿಷ್ಠಾಪನೆ ಮಾಡಲಾಯಿತು. 8ನೇ ವರ್ಷದ ವರ್ಧಂತಿ ಕಾರ್ಯಕ್ರಮದ ಅಂಗವಾಗಿ ಹೂವಿನ ಅಲಂಕಾರ,ಪಂಚಾಮೃತ ಅಭಿಷೇಕ, ಲಕ್ಷ ಕುಂಕುಮಾರ್ಚನೆಯನ್ನು ಏರ್ಪಡಿಸಲಾಗಿತ್ತು. ಪೂಜೆಯಲ್ಲಿ ಸುಹಾಸಿನಿ ಪಾಲ್ಗೊಂಡಿದ್ದರು.