ಗ್ರಾಮದಲ್ಲಿ ಒಂದೂವರೆ ಎಕರೆ ಜಮೀನನ್ನು ದಲಿತ ಸಮುದಾಯದ ಸ್ಮಶಾನಕ್ಕೆ ಮೀಸಲಿರಿಸಲಾಗಿದೆ. ಮಂಗಳವಾರ ಸಮುದಾಯದ ವ್ಯಕ್ತಿ ಪುಟ್ಟರಾಮಯ್ಯ (72) ಮೃತಪಟ್ಟಿದ್ದು, ಅವರ ಶವಸಂಸ್ಕಾರ ನಡೆಸಲು ಹೋದಾಗ ಗ್ರಾಮದ
ವ್ಯಕ್ತಿಯೊಬ್ಬರು ಸ್ಮಶಾನದ ಜಾಗ ತಮಗೆ ಸೇರಿದ್ದೆಂದು ಅಡ್ಡಿಪಡಿಸಿ ತಕರಾರು ಮಾಡಿದ್ದಾರೆ. ಅಲ್ಲದೆ, ಶವ ಸಂಸ್ಕಾರ ನಡೆಸಲು ಅವಕಾಶ ಕೊಡಲಿಲ್ಲ ಎಂದು ದೂರಿದರು.