ಮಾಗಡಿ: ರಂಗೇನಹಳ್ಳಿಯಲ್ಲಿ ಗುರುವಾರ ಸಂಜೆ ಗುಡುಗು, ಮಿಂಚು ಸಹಿತ ಬೀಸಿದ ಬಿರುಗಾಳಿಗೆ ರೈತ ಜಯಣ್ಣ ಅವರ ಫಲಭರಿತ ಬಾಳೆ ತೋಟದ ಬಹುತೇಕ ಮರಗಳು ಧರೆಗೆ ಉರುಳಿವೆ.
ಮುಂದಿನ ವಾರ ಕಟಾವು ಮಾಡಬೇಕಿದ್ದ ಪಚ್ಚಬಾಳೆಯ 55 ಗಿಡಗಳು ಗೊನೆಗಳ ಸಹಿತ ಉರುಳಿ ಬಿದ್ದಿವೆ.
ರಂಗೇನಹಳ್ಳಿ, ನಾಯಕನಪಾಳ್ಯ, ಸಾವನದುರ್ಗ, ಹೊಸಪಾಳ್ಯ ಸುತ್ತಲಿನ ಪ್ರದೇಶದಲ್ಲಿ ಬಿರುಗಾಳಿಯಿಂದ ಬೆಳೆ ನಷ್ಟವುಂಟಾಗಿದ್ದು ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮನವಿ ಮಾಡಿದ್ದಾರೆ.