ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಸುದರ್ಶನ್ ಮತ್ತೆ ತಹಶೀಲ್ದಾರ್!

ವರ್ಗಾವಣೆ ಪ್ರಹಸನಕ್ಕೆ ತೆರೆ ಎಳೆದ ಕೆಎಟಿ
Last Updated 30 ಜೂನ್ 2022, 5:32 IST
ಅಕ್ಷರ ಗಾತ್ರ

ಚನ್ನಪಟ್ಟಣ:ಚನ್ನಪಟ್ಟಣ ತಹಶೀಲ್ದಾರ್ ಹುದ್ದೆಯಲ್ಲಿ ಮುಂದುವರೆಯುವಂತೆ ಕರ್ನಾಟಕ ಆಡಳಿತ ನ್ಯಾಯಾಧೀಕರಣ (ಕೆಎಟಿ) ತೀರ್ಪು ನೀಡಿದ ಹಿನ್ನೆಲೆಯಲ್ಲಿ ಬಿ.ಕೆ.ಸುದರ್ಶನ್ ಬುಧವಾರ ಅಧಿಕಾರ ವಹಿಸಿಕೊಂಡರು.

ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರ್ಷವರ್ಧನ್ ಅವರಿಗೆ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶ ನೀಡಲಾಗಿದೆ.

ವಿವರ: ಎರಡು ವರ್ಷಗಳ ಹಿಂದೆ ಚನ್ನಪಟ್ಟಣ ತಹಶೀಲ್ದಾರ್ ಆಗಿದ್ದ ಸುದರ್ಶನ್ ಅವರನ್ನು ಎತ್ತಂಗಡಿ ಮಾಡಿ ಅವರ ಜಾಗಕ್ಕೆ ನಾಗೇಶ್ ಅವರನ್ನು ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿತ್ತು. ಎರಡು ವರ್ಷ ನಾಗೇಶ್ ಕಾರ್ಯನಿರ್ವಹಿಸಿದ್ದರು.

ಈ ನಡುವೆ 2022ರ ಏಪ್ರಿಲ್‌ 8 ರಂದು ನಾಗೇಶ್ ಜಾಗಕ್ಕೆ ಸುದರ್ಶನ್ ವರ್ಗವಾಗಿ ಬಂದರು. ಅವರು ಬಂದು ಅಧಿಕಾರ ವಹಿಸಿಕೊಳ್ಳುವ ಮೊದಲೇ ಕಂದಾಯ ಇಲಾಖೆ ಮತ್ತೆ ಅವರ ವರ್ಗಾವಣೆ ರದ್ದು ಮಾಡಿತ್ತು.

ಮತ್ತೆ ಏಪ್ರಿಲ್ 29ರಂದು ಕಂದಾಯ ಇಲಾಖೆ ಆದೇಶದಂತೆ ತಹಶೀಲ್ದಾರ್ ಆಗಿದ್ದ ನಾಗೇಶ್ ಅವರ ವರ್ಗಾವಣೆ ಮಾಡಲಾಗಿತ್ತು. ಅಂದು ಸಂಜೆಯೆ ಬಿ.ಕೆ.ಸುದರ್ಶನ್ ಅಧಿಕಾರ ವಹಿಸಿಕೊಂಡಿದ್ದರು. ಮಾರನೇ ದಿನ ಏಪ್ರಿಲ್‌ 30 ರಂದು ಮತ್ತೆ ಬಿ.ಕೆ.ಸುದರ್ಶನ್ ಅವರನ್ನು ಎತ್ತಂಗಡಿ ಮಾಡಿ ಅವರ ಜಾಗಕ್ಕೆ ಹರ್ಷವರ್ಧನ್ ಅವರನ್ನು ನೂತನ ತಹಶೀಲ್ದಾರ್ ಆಗಿ ನೇಮಿಸಲಾಗಿತ್ತು. ಕೇವಲ 24 ಗಂಟೆಗಳಲ್ಲಿ ಮೂರು ಮಂದಿ ಚನ್ನಪಟ್ಟಣ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು.

ಇದನ್ನು ಪ್ರಶ್ನಿಸಿ ನಾಗೇಶ್ ಹಾಗೂ ಸುದರ್ಶನ್ ಇಬ್ಬರೂ ಕೆಎಟಿ ಮೊರೆ ಹೋಗಿದ್ದರು. ಇಬ್ಬರ ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿಯು ಸುದರ್ಶನ್ ಅವರು ತಹಶೀಲ್ದಾರ್ ಆಗಿ ಮುಂದುವರೆಯುವ ತೀರ್ಪು ನೀಡಿತ್ತು.

ನಾಗೇಶ್ ವಿಧಾನಸೌಧ ಸಚಿವಾಲಯದ ಅಧಿಕಾರಿಯಾಗಿದ್ದು, ಎರವಲು ಸೇವೆಯ ಮೇಲೆ ತಹಶೀಲ್ದಾರ್ ಆಗಿ ನಿಯೋಜನೆಗೊಂಡಿದ್ದರು. ಅವರ ಅವಧಿ ಮುಗಿದ ಕಾರಣ ಅವರ ಅರ್ಜಿ ವಜಾಗೊಳಿಸಲಾಗಿದೆ. ಇನ್ನೂ ಹರ್ಷವರ್ಧನ್ ಗ್ರೇಡ್-2 ತಹಶೀಲ್ದಾರ್ ಆಗಿದ್ದು, ಇವರನ್ನು ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಹಾಗಾಗಿ ಸುದರ್ಶನ್ ಅವರು ತಹಶೀಲ್ದಾರ್ ಆಗಿ ಮುಂದುವರೆಯಬೇಕು ಎಂದು ಕೆಎಟಿ ತೀರ್ಪು ನೀಡಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಸುದರ್ಶನ್ ಮತ್ತೆ ಚನ್ನಪಟ್ಟಣ ತಹಶೀಲಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT