ನಾಗೇಶ್ ವಿಧಾನಸೌಧ ಸಚಿವಾಲಯದ ಅಧಿಕಾರಿಯಾಗಿದ್ದು, ಎರವಲು ಸೇವೆಯ ಮೇಲೆ ತಹಶೀಲ್ದಾರ್ ಆಗಿ ನಿಯೋಜನೆಗೊಂಡಿದ್ದರು. ಅವರ ಅವಧಿ ಮುಗಿದ ಕಾರಣ ಅವರ ಅರ್ಜಿ ವಜಾಗೊಳಿಸಲಾಗಿದೆ. ಇನ್ನೂ ಹರ್ಷವರ್ಧನ್ ಗ್ರೇಡ್-2 ತಹಶೀಲ್ದಾರ್ ಆಗಿದ್ದು, ಇವರನ್ನು ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಹಾಗಾಗಿ ಸುದರ್ಶನ್ ಅವರು ತಹಶೀಲ್ದಾರ್ ಆಗಿ ಮುಂದುವರೆಯಬೇಕು ಎಂದು ಕೆಎಟಿ ತೀರ್ಪು ನೀಡಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಸುದರ್ಶನ್ ಮತ್ತೆ ಚನ್ನಪಟ್ಟಣ ತಹಶೀಲಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.