ಗ್ರಾಮದ ಸಂತಸೇವಲಾಲ್, ದಂಡಿನ ಮಾರಮ್ಮ ಹಾಗೂ ಬಸವೇಶ್ವರ ದೇವಾಲಯಗಳಲ್ಲಿ ಕಳ್ಳತನ ನಡೆದಿದೆ. ದೇವರ ಮೇಲೆ ಹಾಕಿದ್ದ ಬಂಗಾರ ಮತ್ತು ಬೆಳ್ಳಿಯ ಒಡವೆ ಮತ್ತು ಹುಂಡಿಯಲ್ಲಿದ್ದ ಸುಮಾರು ₹80 ಸಾವಿರ ಹಣ ದೋಚಿದ್ದಾರೆ. ಗ್ರಾಮಸ್ಥರು ಬೆಳಿಗ್ಗೆ ದೇವಾಲಯದ ಕಡೆಗೆ ಹೋದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ. ಗ್ರಾಮಸ್ಥರು ಹಾರೋಹಳ್ಳಿ ಪೊಲೀಸ್ ಠಾಣೆಗ ಈ ಸಂಬಂಧ ದೂರು ನೀಡಿದ್ದಾರೆ.