ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಜಿಂಕೆ ನುಂಗಿದ್ದ ಹೆಬ್ಬಾವು ರಕ್ಷಣೆ

Last Updated 4 ಮೇ 2021, 4:42 IST
ಅಕ್ಷರ ಗಾತ್ರ

ಕನಕಪುರ: ಜಿಂಕೆ ನುಂಗಿದ್ದ ಹೆಬ್ಬಾವನ್ನು ಉರುಗ ಪ್ರೇಮಿ ಸ್ನೇಕ್‌ ನವೀನ್‌ ಹಿಡಿದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿರುವುದು ತಾಲ್ಲೂಕಿನ ಸಾತನೂರು ಹೋಬಳಿ ಸೋಲಿಗೇರಿಯಲ್ಲಿ ಸೋಮವಾರ ನಡೆದಿದೆ.

ಸೋಲಿಗೇರಿ ಗ್ರಾಮದಲ್ಲಿ ಸುಮಾರು 35 ಕೆ.ಜಿ ತೂಕದ ಚಿಂಕೆಯನ್ನು ಭೇಟಿಯಾಡಿ ನುಂಗುವ 11 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ತಕ್ಷಣವೇ ಅವರು ಹಾವು ಹಿಡಿಯುವ ಮಳಗಾಳ್‌ ಸ್ನೇಕ್‌ ನವೀನ್‌ ಅವರಿಗೆ ಕರೆ ಮಾಡಿದ್ದಾರೆ.

ಕೂಡಲೇ, ಸ್ನೇಹಿತನ ಜತೆಯಲ್ಲಿ ಹೊರಟ ನವೀನ್‌ ಕಾರ್ಯಪ್ರವೃತ್ತರಾಗಿ ಜಿಂಕೆಯನ್ನು ನುಂಗಿ ಜಮೀನಿನಲ್ಲಿದ್ದ ಹೆಬ್ಬಾವನ್ನು ಹಿಡಿದು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಹರಿಹರ ರವೀಂದ್ರೇಗೌಡ (ಪಪ್ಪಿ), ನಿತಿನ್‌ ಮತ್ತು ಸೋಲಿಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT