ಕೆಲವು ದಿನಗಳ ಹಿಂದೆ ಆರೋಪಿಗಳು ತಾಲ್ಲೂಕಿನ ಬೈರಶೆಟ್ಟಿಹಳ್ಳಿ ಗ್ರಾಮದ ಅಂಜನೇಯಸ್ವಾಮಿ ದೇವಾಲಯ, ಕನ್ನಮ್ಮರಾಯಸ್ವಾಮಿ ದೇವಾಲಯ ಹಾಗೂ ಕೋಣನಮಾರಮ್ಮ ದೇವಾಲಯದ ಬಾಗಿಲು ಮುರಿದು ಹುಂಡಿ ದೋಚಿದ್ದರು. ಅಲ್ಲದೆ ಹನಿಯೂರು ಹಾಗೂ ಬಲ್ಲಾಪಟ್ಟಣ ಗ್ರಾಮಗಳ ತೋಟದಲ್ಲಿ ಪಂಪ್ ಸೆಟ್, ಕೇಬಲ್ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.