ಎಲ್ಲೆಲ್ಲಿ ಜಾಗೃತಿ: ರಾಮನಗರ ತಾಲ್ಲೂಕಿನ ರಾಮದೇವರ ಬೆಟ್ಟ, ರೇವಣ್ಣಸಿದ್ದೇಶ್ವರ ಬೆಟ್ಟ, ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್, ಕಣ್ವ ಜಲಾಶಯ, ಬೇವೂರು ತಿಮ್ಮಪ್ಪನ ಬೆಟ್ಟ, ಅಪ್ರಮೇಯಸ್ವಾಮಿ ದೇವಾಲಯ, ಮಾಗಡಿ ತಾಲ್ಲೂಕಿನ ಸಾವನದುರ್ಗ, ರಂಗನಾಥಸ್ವಾಮಿ ದೇಗುಲ, ಮಂಚನಬೆಲೆ ಜಲಾಶಯ ಹಾಗೂ ಕನಕಪುರ ತಾಲ್ಲೂಕಿನ ಸಂಗಮ- ಮೇಕೆದಾಟು, ಕಬ್ಬಾಳಮ್ಮ ದೇವಾಲಯ, ಚುಂಚಿಫಾಲ್ಸ್ ಮತ್ತು ಕಲ್ಲಹಳ್ಳಿಯ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ತಲಾ ಇಬ್ಬರು 'ಪ್ರವಾಸಿಮಿತ್ರರು' ಬರುವ ಪ್ರವಾಸಿಗರಿಗೆ ಮತಜಾಗೃತಿ ಪ್ರಚಾರ ಸಾಮಾಗ್ರಿಗಳನ್ನು ನೀಡಿ ಮನವಿ ಮಾಡಲಿದ್ದಾರೆ.