ರಾಮನಗರ: ಮಾಗಡಿ ತಹಶೀಲ್ದಾರ್ ಸೇರಿದಂತೆ ಹಲವರ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಅವರನ್ನು ತುಮಕೂರು ತಹಶೀಲ್ದಾರ್ ಆಗಿ ವರ್ಗ ಮಾಡಲಾಗಿತ್ತು. ನಂತರದಲ್ಲಿ ಸರ್ಕಾರ ಅವರ ವರ್ಗಾವಣೆಯನ್ನು ರದ್ದುಪಡಿಸಿದ್ದು, ಮಾಗಡಿಯಲ್ಲೇ ಮುಂದುವರಿದಿದ್ದಾರೆ. ಅಂತೆಯೇ ಮಾಗಡಿ ಡಿವೈಎಸ್ಪಿ ಓಂಪ್ರಕಾಶ್ ಅವರ ವರ್ಗಾವಣೆ ಆದೇಶವೂ ರದ್ದಾಗಿದೆ.
ಚನ್ನಪಟ್ಟಣದ ಡಿವೈಎಸ್ಪಿ ಕೆ.ಎನ್. ರಮೇಶ್ ಅವರನ್ನು ಕೋಲಾರದ ಡಿಸಿಆರ್ಇ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಭ್ರಷ್ಟಾಚಾರ ನಿಗ್ರಹ ದಳದ ಕರುಣಾಕರ್ ಶೆಟ್ಟಿ ಅವರನ್ನು ವರ್ಗಾಯಿಸಲಾಗಿತ್ತು. ಅವರ ವರ್ಗಾವಣೆಯೂ ರದ್ದಾಗಿದೆ. ಹೀಗಾಗಿ ಸದ್ಯಕ್ಕೆ ಚನ್ನಪಟ್ಟಣ ಡಿವೈಎಸ್ಪಿ ಹುದ್ದೆಗೆ ಸರ್ಕಾರ ಯಾರನ್ನೂ ನಿಯೋಜಿಸಿಲ್ಲ.