ಕಸಬಾ ಹೋಬಳಿ ಬರಡನಹಳ್ಳಿ ಗ್ರಾಮದ ಮಾವತ್ತೂರೆಗೌಡರ ಪುತ್ರ ದರ್ಶನ್ (40) ಮೃತರು.
ಬುಧವಾರ ಮಧ್ಯಾಹ್ನ ಬರಡನಹಳ್ಳಿ ಗ್ರಾಮದಿಂದ ರೈಸ್ಮಿಲ್ ಬಳಿಗೆ ಬಂದಿದ್ದ ದರ್ಶನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಬೈಕ್ ಗುದ್ದಿದೆ. ಬೈಕ್ ಗುದ್ದಿದ ಬಿರುಸಿಗೆ ದರ್ಶನ್ ರಸ್ತೆಯ ಮೇಲೆ ಬಿದ್ದು ತಲೆ ಒಡೆದು ಅತಿಯಾದ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರನೂ ಗಾಯಗೊಂಡಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಮೃತರ ತಾಯಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.