ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾ ಪ್ರೋತ್ಸಾಹಕರಾದ ಚಿಕ್ಕ ವೆಂಕಟೇಶ್, ಸುಮತಿ ಕುಮಾರ್ ಜೈನ್, ರಂಗ ನಿರ್ದೇಶಕ ಧರ್ಮೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮುಖಂಡ ಕೊಳ್ಳಿಗನಹಳ್ಳಿ ರಾಮು, ಕಲಾವಿದ ಗೋಪಾಲಗೌಡ, ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಸಿಂ.ಲಿಂ. ನಾಗರಾಜು, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲೆಕೇರಿ ರವೀಶ್, ಕಲಾವಿದರಾದ ಎಲೆಕೇರಿ ಮಂಜುನಾಥ್, ಕೂಡ್ಲೂರು ವೆಂಕಟೇಶ್, ಮಹೇಶ್ ಕುಮಾರ್ ಇದ್ದರು.