ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರುವುದನ್ನು ನಿಷೇಧಿಸಿ ಸರ್ಕಾರದಿಂದ ಆದೇಶ ಮಾಡಿದ್ದರೂ, ಹಲವಾರು ಜಿಲ್ಲೆಗಳಲ್ಲಿ ಇಲಾಖೆ ಸಿಬ್ಬಂದಿ ಕೆಲಸ ಮಾಡಬೇಕಾಗಿದೆ. ಇದರಿಂದ ಕೌಟುಂಬಿಕ ಕಲಹಗಳು ಉಂಟಾಗುತ್ತಿದ್ದು, ಮಾನಸಿಕವಾಗಿ ಹತಾಶರಾಗುತ್ತಿದ್ದಾರೆ. ಜತೆಗೆ ಅನ್ಯ ಇಲಾಖೆಯ ಕೆಲಸದ ಒತ್ತಡ, ಮುಂಬಡ್ತಿಯಲ್ಲಿ ಆಗುತ್ತಿರುವ ನಿರಂತರ ಅನ್ಯಾಯ, ಗ್ರಾಮ ಲೆಕ್ಕಿಗರ ಜ್ಯೇಷ್ಠತೆಗಳನ್ನು ಒಟ್ಟುಗೂಡಿಸಿ ಪದ ನವೀಕರಿಸುವುದು, ಪ್ರಯಾಣ ಭತ್ಯೆ ಧರವನ್ನು ಪರಿಷ್ಕರಿಸಿ ಒಂದು ಸಾವಿರಕ್ಕೆ ಹೆಚ್ಚಿಸುವುದು, ಜಾಬ್ ಚಾರ್ಟ್ ನೀಡುವುದು ಹಾಗೂ ಗ್ರಾಮ ಸಹಾಯಕರ ಹುದ್ದೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಪಧಾದಿಕಾರಿಗಳಾದ ಜಗದೀಶ್, ಎ. ಹರ್ಷ, ಎಂ.ಸಿ.ರಾಜಶೇಖರ್, ಎಂ.ಬಿ ಯೋಗೇಶ್, ನಾಗರಾಜು, ನಾರಾಯಣ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ತಂಗರಾಜು, ವೆಂಕಟೇಶ್, ಮೋಹನ್, ಚಂದ್ರು ಇದ್ದರು.