ಮಾಗಡಿ: ತಾಲ್ಲೂಕಿನ ಪೋಲೋಹಳ್ಳಿ ಭವತಾರಿಣಿ ಆಶ್ರಮದಲ್ಲಿ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಿರುವ ವಿವೇಕಾನಂದ ಕುಟೀರ ಉದ್ಘಾಟನೆ ಹಾಗೂ ಚಂಡಿಕಾಹೋಮ ಜೂನ್ 1 ರಂದು ನಡೆಯಲಿದೆ ಎಂದು ಮಾತಾಜಿ ವಿವೇಕಮಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಂದು ಬೆಳಿಗ್ಗೆ 7 ಗಂಟೆಗೆ ಚಂಡಿಕಾಹೋಮ ನಡೆಯಲಿದೆ. 9 ಗಂಟೆಗೆ ವಿವೇಕಾನಂದ ಕುಟೀರವನ್ನು ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಗದಗ ಮಠದ ಸ್ವಾಮಿ ನಿರ್ಭಯಾನಂದ ಸರಸ್ವತಿ ವಿವೇಕಾನಂದರ ದೃಷ್ಟಿಯಲ್ಲಿ ಶ್ರೀರಾಮಕೃಷ್ಣ ಪರಮಹಂಸ ಕುರಿತು ಉಪನ್ಯಾಸ ನೀಡಲಿದ್ದಾರೆ. ಶಾಸಕ ಎ.ಮಂಜುನಾಥ ಭಾಗವಹಿಸಲಿದ್ದಾರೆ ಎಂದರು.