‘ಅಧಿಕ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಆದರೂ, ಪ್ಲಾಸ್ಟಿಕ್, ಜಂಡು ಮೊದಲಾದ ತ್ಯಾಜ್ಯಗಳೇ ನದಿ ಕಣಿವೆಯಲ್ಲಿ ಹೆಚ್ಚಾಗಿವೆ. ಸುಮಾರು 2.5 ಅಡಿಯಷ್ಟು ನೀರು ಹೊರಹೋಗುತ್ತಿದೆ. ರಾಸಾಯನಿಕ ವಸ್ತುಗಳಿರುವುದರಿಂದ ನೊರೆಯೊಂದಿಗೆ ನದಿ ಉಕ್ಕಿ ಹರಿಯುತ್ತಿದೆ. ನೀರನ್ನು ಶುದ್ಧೀಕರಿಸುವ ಮತ್ತು ನದಿಯ ಪುನರುಜ್ಜೀವನಕ್ಕೆ ಸರ್ಕಾರ ಬೃಹತ್ ಯೋಜನೆ ರೂಪಿಸಬೇಕು’ ಎಂದು ಸ್ಥಳೀಯ ನಿವಾಸಿ ಮುನಿಯಪ್ಪ ಹೇಳಿದರು.