ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಕೆರೆಯ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಬದಿಯಲ್ಲಿ ಒಂದು ಕಡೆ ಕೆರೆಯ ಏರಿ ಇದ್ದು, ಮತ್ತೊಂದು ಬದಿಯಲ್ಲಿ ಆಲದಮರ ಮರಗಳನ್ನು ಬೆಳೆಸಲಾಗಿದೆ. ಆಲದ ಮರಗಳ ಬೇರುಗಳು ಏರಿಯ ಒಳಗೆ ಹರಡಿಕೊಂಡಿದ್ದು, ಮಣ್ಣನ್ನು ಸಡಿಲಗೊಳಿಸುವುದರಿಂದ ನೀರು ಸೋರಿಕೆ ಆಗುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.