ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜು ಮಾತನಾಡಿ, ರಾಷ್ಟ್ರೀಯ ಪ್ರಥಮ ಚಿಕಿತ್ಸಾ ದಿನವನ್ನು ಆಚರಿಸುತ್ತಿರುವ ಶಾಲೆಯ ಕಾಳಜಿ ಪ್ರಶಂಸನಾರ್ಹ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಆತನಿಗೆ ತಕ್ಷಣ ಪ್ರಥಮ ಚಕಿತ್ಸೆ ಅಗತ್ಯವಿರುತ್ತದೆ. ಇದರಿಂದ ಆತನ ಪ್ರಾಣ ಉಳಿಸಬಹುದು. ಇದನ್ನು ಮಕ್ಕಳಿಗೆ ತಿಳಿಸಿಕೊಡುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಕಿವಿಮಾತು ಹೇಳಿದರು.