ನಗರದ ಬಿ.ಎಂ.ರಸ್ತೆಯಲ್ಲಿ ಸೋಮವಾರ ಸಂಜೆ ಮಂಡ್ಯದಿಂದ ಬಿಡದಿ ಕಡೆಗೆ ಚಲಿಸುತ್ತಿದ್ದ ಲಾರಿಯೊಂದನ್ನು ಅಡ್ಡಹಾಕಿದ ಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮಮತಾ ಅವರು, ಲಾರಿ ಚಾಲಕ ಯೋಗಾನಂದ್ ಎಂಬುವರಿಗೆ ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ದಂಡ ಹಾಕಿ ರಶೀದಿ ನೀಡಿದ್ದಾರೆ. ರಶೀದಿಯಲ್ಲಿ ವಿಥೌಟ್ ಹೆಲ್ಮೆಟ್ ಎಂದು ನಮೂದಿಸಿ ಸಹಿ ಮಾಡಿ ಸೀಲ್ ಹಾಕಿದ್ದಾರೆ.